ಕೊರೋನಾ: ಜನತಾ ಕರ್ಫ್ಯೂಗೆ ದೇವೇಗೌಡರ ಬೆಂಬಲ…

-masthmagaa.com:

ಬೆಂಗಳೂರು: ಕೊರೋನಾ ವಿಚಾರವಾಗಿ ಪ್ರಧಾನಿ ಮೋದಿ ಮತ್ತು ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಮಾಜಿ ಪ್ರಧಾನಿ ಹೆಚ್​​.ಡಿ ದೇವೇಗೌಡರು ಜೈ ಎಂದಿದ್ದಾರೆ. ಈ ಬಗ್ಗೆ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ದೇವೇಗೌಡರು, ಕೊರೋನಾ ಮಹಾಮಾರಿಯನ್ನು ದೇಶದ ಪ್ರತಿಯೊಬ್ಬ ಪ್ರಜೆಯೂ ಸ್ವಯಂ ‌ಸಂಕಲ್ಪ ಹಾಗೂ ಸಂಯಮದಿಂದ ಎದುರಿಸಬೇಕೆಂಬ ಪ್ರಧಾನಿ ಮೋದಿಯವರ ಮಾತು‌ ಪಾಲನೆಗೆ ಯೋಗ್ಯವಾಗಿದೆ. ಹೀಗಾಗಿ ಮಾರ್ಚ್ 22 ಭಾನುವಾರದಂದು  ಕರೆ ನೀಡಿರುವ ‘ಜನತಾ ಕರ್ಫ್ಯೂ’ವನ್ನು ಬೆಂಬಲಿಸುವ ಮೂಲಕ ಸಾಮಾಜಿಕ ಕರ್ತವ್ಯವನ್ನು ಪಾಲಿಸೋಣ ಎಂದು ಟ್ವೀಟ್ ಮಾಡಿದ್ದಾರೆ. 

ಜೊತೆಗೆ ನಿನ್ನೆ ಪ್ರಧಾನಿ ಮೋದಿಯವರು ಮಾಡಿದ ಭಾಷಣ ಸಮಯೋಚಿತವೂ, ಆಚರಣೆ ಯೋಗ್ಯವೂ ಆಗಿದೆ. ಪ್ರಧಾನಿ ಮೋದಿಯವರ ಕರೆಯ ಹಿಂದಿರೋ ಕಾಳಜಿ ಮತ್ತು ಬದ್ಧತೆಯನ್ನು ಅರ್ಥ ಮಾಡಿಕೊಂಡು ಎಲ್ಲರೂ ಅದನ್ನು ಪಾಲಿಸೋಣ. ಪ್ರಧಾನಿಯವರ ಕರೆಯನ್ನು ಯಾವುದೇ ರಾಜಕೀಯ ಸೋಂಕು ಅಥವಾ ರಾಜಕೀಯ ಲೇಪ ಹಚ್ಚದೇ ನಾವೆಲ್ಲರೂ ಸ್ವಾಗತಿಸಬೇಕು ಎಂದು ಮಾಧ್ಯಮ ಪ್ರಕಟಣೆಯಲ್ಲಿ ಕರೆ ನೀಡಿದ್ದಾರೆ.

masthmagaa.com

Contact Us for Advertisement

Leave a Reply