masthmagaa.com:

‘ಪಶ್ಚಿಮ ಬಂಗಾಳವನ್ನ ಪಶ್ಚಿಮ ಬಾಂಗ್ಲಾದೇಶವನ್ನಾಗಿ ಮಾಡಲು ಮಮತಾ ಬ್ಯಾನರ್ಜಿ ಪಿತೂರಿ ನಡೆಸ್ತಿದ್ದಾರೆ’ ಅಂತ ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಗಂಭೀರ ಆರೋಪ ಮಾಡಿದ್ದಾರೆ. ಇದರ ಜೊತೆಗೆ, ‘ದೆಹಲಿಯಿಂದ ಬಿಜೆಪಿ ನಾಯಕರು ಬಂದ್ರೆ ಮಮತಾ ಬ್ಯಾನರ್ಜಿ ಹೆದರಿ ಹೋಗ್ತಾರೆ. ಗುಜರಾತ್​ನಿಂದ ಮಹಾತ್ಮ ಗಾಂಧೀಜಿ ಬಂದಾಗ ನೀವು ಅವರನ್ನ ಪೂಜಿಸುತ್ತೀರಿ. ಆದ್ರೆ ಅದೇ ಗುಜರಾತ್​ನಿಂದ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಬಂದಾಗ ಹೆದರೋದೇಕೆ..?’ ಅಂತ ದಿಲೀಪ್ ಘೋಷ್ ಪ್ರಶ್ನಿಸಿದ್ದಾರೆ. ಮುಂದಿನ ವರ್ಷ ನಡೆಯಲಿರುವ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಬಿಜೆಪಿ, ಟಿಎಂಸಿ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳು ಈಗಲೇ ಆರೋಪ, ಪ್ರತ್ಯಾರೋಪದಲ್ಲಿ ತೊಡಗಿವೆ.

-masthmagaa.com

Contact Us for Advertisement

Leave a Reply