masthmagaa.com:
‘ಪಶ್ಚಿಮ ಬಂಗಾಳವನ್ನ ಪಶ್ಚಿಮ ಬಾಂಗ್ಲಾದೇಶವನ್ನಾಗಿ ಮಾಡಲು ಮಮತಾ ಬ್ಯಾನರ್ಜಿ ಪಿತೂರಿ ನಡೆಸ್ತಿದ್ದಾರೆ’ ಅಂತ ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಗಂಭೀರ ಆರೋಪ ಮಾಡಿದ್ದಾರೆ. ಇದರ ಜೊತೆಗೆ, ‘ದೆಹಲಿಯಿಂದ ಬಿಜೆಪಿ ನಾಯಕರು ಬಂದ್ರೆ ಮಮತಾ ಬ್ಯಾನರ್ಜಿ ಹೆದರಿ ಹೋಗ್ತಾರೆ. ಗುಜರಾತ್ನಿಂದ ಮಹಾತ್ಮ ಗಾಂಧೀಜಿ ಬಂದಾಗ ನೀವು ಅವರನ್ನ ಪೂಜಿಸುತ್ತೀರಿ. ಆದ್ರೆ ಅದೇ ಗುಜರಾತ್ನಿಂದ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಬಂದಾಗ ಹೆದರೋದೇಕೆ..?’ ಅಂತ ದಿಲೀಪ್ ಘೋಷ್ ಪ್ರಶ್ನಿಸಿದ್ದಾರೆ. ಮುಂದಿನ ವರ್ಷ ನಡೆಯಲಿರುವ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಬಿಜೆಪಿ, ಟಿಎಂಸಿ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳು ಈಗಲೇ ಆರೋಪ, ಪ್ರತ್ಯಾರೋಪದಲ್ಲಿ ತೊಡಗಿವೆ.
-masthmagaa.com
Contact Us for Advertisement