‘ಕನಕಪುರ ಬಂಡೆ‘ಗೆ ಕೊನೆಗೂ ಜಾಮೀನು..! ಜೈಲುವಾಸ ಅಂತ್ಯ…

ದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ 50 ದಿನಗಳ ಜೈಲು ವಾಸದಿಂದ ಡಿಕೆಶಿಗೆ ಕೊನೆಗೂ ಮುಕ್ತಿ ಸಿಕ್ಕಿದೆ. ದೆಹಲಿ ಹೈಕೋರ್ಟ್​ ನ್ಯಾಯಮೂರ್ತಿ ಸುರೇಶ್ ಕುಮಾರ್ ಕೈಟ್, ಡಿಕೆಶಿಗೆ ಜಾಮೀನು ನೀಡಿ ಆದೇಶಿಸಿದ್ದಾರೆ. ಅಧಿಕಾರಿಗಳು ಕರೆದಾಗ ವಿಚಾರಣೆಗೆ ಬರಬೇಕು, 25 ಲಕ್ಷ ರೂಪಾಯಿಯ ಬಾಂಡ್​​, ಇಬ್ಬರ ಶ್ಯೂರಿಟಿಯೊಂದಿಗೆ ಷರತ್ತುಬದ್ಧ ಜಾಮೀನು ನೀಡಲಾಗಿದೆ. ಪಾಸ್​ಪೋರ್ಟ್​ ಕೂಡ ಕೋರ್ಟ್​ ವಶಕ್ಕೆ ನೀಡಲಾಗಿದ್ದು, ವಿದೇಶಕ್ಕೆ ಹೋಗಬೇಕಾದರೆ ಅನುಮತಿ ಪಡೆಯೋದು ಅಗತ್ಯ.

ಇನ್ನು ಡಿಕೆಶಿಗೆ ಜಾಮೀನು ಸಿಗುತ್ತಿದ್ದಂತೆ ಸಹೋದರ ಡಿಕೆ ಸುರೇಶ್, ಕೋರ್ಟ್ ಆವರಣದಲ್ಲೇ ಗಳಗಳನೆ ಅತ್ತುಬಿಟ್ಟಿದ್ದಾರೆ.

 

Contact Us for Advertisement

Leave a Reply