ದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ 50 ದಿನಗಳ ಜೈಲು ವಾಸದಿಂದ ಡಿಕೆಶಿಗೆ ಕೊನೆಗೂ ಮುಕ್ತಿ ಸಿಕ್ಕಿದೆ. ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಸುರೇಶ್ ಕುಮಾರ್ ಕೈಟ್, ಡಿಕೆಶಿಗೆ ಜಾಮೀನು ನೀಡಿ ಆದೇಶಿಸಿದ್ದಾರೆ. ಅಧಿಕಾರಿಗಳು ಕರೆದಾಗ ವಿಚಾರಣೆಗೆ ಬರಬೇಕು, 25 ಲಕ್ಷ ರೂಪಾಯಿಯ ಬಾಂಡ್, ಇಬ್ಬರ ಶ್ಯೂರಿಟಿಯೊಂದಿಗೆ ಷರತ್ತುಬದ್ಧ ಜಾಮೀನು ನೀಡಲಾಗಿದೆ. ಪಾಸ್ಪೋರ್ಟ್ ಕೂಡ ಕೋರ್ಟ್ ವಶಕ್ಕೆ ನೀಡಲಾಗಿದ್ದು, ವಿದೇಶಕ್ಕೆ ಹೋಗಬೇಕಾದರೆ ಅನುಮತಿ ಪಡೆಯೋದು ಅಗತ್ಯ.
ಇನ್ನು ಡಿಕೆಶಿಗೆ ಜಾಮೀನು ಸಿಗುತ್ತಿದ್ದಂತೆ ಸಹೋದರ ಡಿಕೆ ಸುರೇಶ್, ಕೋರ್ಟ್ ಆವರಣದಲ್ಲೇ ಗಳಗಳನೆ ಅತ್ತುಬಿಟ್ಟಿದ್ದಾರೆ.
Contact Us for Advertisement