masthmagaa.com:
ದೆಹಲಿ: ಜನವರಿಯ ಗಣರಾಜ್ಯೋತ್ಸವಕ್ಕೆ ಈ ಬಾರಿ ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ಅವರನ್ನು ಮುಖ್ಯ ಅತಿಥಿಯನ್ನಾಗಿ ಕರೆಯಲಾಗಿತ್ತು. ಆದ್ರೀಗ ಅವರು ಭಾರತಕ್ಕೆ ಬರೋದು ಅನುಮಾನ.. ಯಾಕಂದ್ರೆ ಬ್ರಿಟನ್ನಲ್ಲಿ ಈಗಾಗಲೇ ಹೊಸ ಕೊರೋನಾ ಪತ್ತೆಯಾಗಿರೋದು ವಿಶ್ವವನ್ನೇ ಆತಂಕಕ್ಕೀಡು ಮಾಡಿದೆ. ಹೀಗಾಗಿ ಅವರು ಭಾರತ ಪ್ರವಾಸ ಕೈಗೊಳ್ಳುವ ಸಾಧ್ಯತೆ ಕಡಿಮೆ ಅಂತ ನಿನ್ನೆಯಷ್ಟೇ ಬ್ರಿಟಿಷ್ ಮೆಡಿಕಲ್ ಅಸೋಸಿಯೇಷನ್ನ ಮುಖ್ಯಸ್ಥ ಚಾಂದ್ ನಾಗ್ಪೌಲ್ ಹೇಳಿದ್ರು.
ಅದೇ ರೀತಿ ಸಾಮಾಜಿಕ ಜಾಲತಾಣದಲ್ಲೂ ಭಾರತೀಯರಿಂದ ಕ್ಯಾಂಪೇನ್ ಶುರು ಮಾಡಲಾಗ್ತಿದೆ. ಕಳೆದ ಬಾರಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಂದು ಹೋದ ಬಳಿಕ ಕೊರೋನಾ ಶುರುವಾಯ್ತು. ಅದೇ ರೀತಿ ಈಗ ಬ್ರಿಟನ್ ಪ್ರಧಾನಿ ಬಂದು ಹೊಸ ಕೊರೋನಾ ಶುರುವಾಗೋದು ಬೇಡ ಅಂತ ಕಿಡಿಕಾರುತ್ತಿದ್ದಾರೆ.
ಈ ನಡುವೆ ರೈತ ಸಂಘಗಳು ಕೂಡ ಬ್ರಿಟಿಷ್-ಪಂಜಾಬಿ ನಾಯಕರಿಗೆ ಪತ್ರ ಬರೆದಿದ್ದು, ಬೋರಿಸ್ ಜಾನ್ಸನ್ ಆಗಮನವನ್ನು ವಿರೋಧಿಸಿದ್ಧಾರೆ. ಜೊತೆಗೆ ಕೇಂದ್ರ ಸರ್ಕಾರ ಕೃಷಿ ಕಾನೂನುಗಳನ್ನು ವಾಪಸ್ ಪಡೆಯದೇ ಇದ್ದರೆ ಗಣರಾಜ್ಯೋತ್ಸವ ಅತಿಥಿಯಾಗಿ ಬೋರಿಸ್ ಜಾನ್ಸನ್ ಭಾರತಕ್ಕೆ ಬರದಂತೆ ಮನವಿ ಮಾಡಿ ಅಂತ ಒತ್ತಾಯಿಸಿದ್ದಾರೆ.
-masthmagaa.com
Contact Us for Advertisement