masthmagaa.com:
ಶ್ರೀಲಂಕಾ: ಎಂಟಿ ನ್ಯೂ ಡೈಮಂಡ್ ತೈಲ ಟ್ಯಾಂಕರ್ನಲ್ಲಿ ಕಾಣಿಸಿಕೊಂಡಿದ್ದ ಬೆಂಕಿಯನ್ನು ಭಾರತದ ಸಹಾಯದೊಂದಿಗೆ ಯಶಸ್ವಿಯಾಗಿ ನಂದಿಸಲಾಗಿದೆ. ಜಂಟಿ ಕಾರ್ಯಾಚರಣೆಯಿಂದ ಇದು ಸಾಧ್ಯವಾಗಿದೆ ಅಂತ ಶ್ರೀಲಂಕಾ ತಿಳಿಸಿದೆ. ಸದ್ಯ ಹಡಗು ಕರಾವಳಿ ತೀರದಿಂದ 70 ಕಿಲೋಮೀಟರ್ ದೂರದಲ್ಲಿದ್ದು, ಭಾರತದ ಐಎನ್ಎಸ್ ಸಹ್ಯಾದ್ರಿ ಬೆಂಗಾವಲಿನಲ್ಲಿದೆ ಅಂತ ಮಾಹಿತಿ ನೀಡಿದೆ.
ಕುವೈತ್ನಿಂದ ಭಾರತಕ್ಕೆ ಬರುತ್ತಿದ್ದ ಈ ಹಡಗಿನಲ್ಲಿ 2,70,000 ಮೆಟ್ರಿಕ್ ಟನ್ನಷ್ಟು ಕಚ್ಛಾ ತೈಲ ಇತ್ತು ಅಂತ ತಿಳಿದು ಬಂದಿದೆ. ಆದ್ರೆ ಶ್ರೀಲಂಕಾದ ಪೂರ್ವ ಕರಾವಳಿ ಬಳಿ ಹಡಗಿನಲ್ಲಿ ಬೆಂಕಿ ಹೊತ್ತಿಕೊಂಡಿತ್ತು. ಹೀಗಾಗಿ ಶ್ರೀಲಂಕಾ ಭಾರತೀಯ ಕರಾವಳಿ ಕಾವಲು ಪಡೆಯ ಬಳಿ ಸಹಾಯ ಯಾಚಿಸಿತ್ತು. ಅದರಂತೆ ಭಾರತ ಸಹಾಯಕ್ಕಾಗಿ ಮೂರು ನೌಕೆಗಳು ಮತ್ತು ಒಂದು ವಿಮಾನವನ್ನು ಕಳುಹಿಸಿತ್ತು.
-masthmagaa.com
Contact Us for Advertisement