masthmagaa.com:
ಬೆಂಗಳೂರು: ಸಚಿವ ನಾಗೇಶ್ ವಿರುದ್ಧ ಹಿರಿಯ ಅಧಿಕಾರಿಯೊಬ್ಬರ ಪುತ್ರಿ ಲಂಚಕ್ಕೆ ಬೇಡಿಕೆಯಿಟ್ಟ ಆರೋಪ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿಗೂ ದೂರು ನೀಡಿದ್ದಾರೆ. ಹೊಸಪೇಟೆಯಲ್ಲಿ ಅಬಕಾರಿ ಇಲಾಖೆ ಜಂಟಿ ಆಯುಕ್ತರಾಗಿರುವ ಮೋಹನ್ ಕುಮಾರ್ ಆರೋಗ್ಯ ಸಮಸ್ಯೆ ಹಿನ್ನೆಲೆ ಬೆಂಗಳೂರಿನ ಜಂಟಿ ಆಯುಕ್ತರ ಹುದ್ದೆಗೆ ವರ್ಗಾವಣೆ ಬಯಸಿದ್ದರು. ಆದ್ರೆ ಹೆಚ್.ನಾಗೇಶ್ 1 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ರು ಅಂತ ಮೋದಿಯವರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ನಾಗೇಶ್ ಜಂಟಿ ಆಯುಕ್ತರನ್ನು ವರ್ಗಾವಣೆ ಮಾಡುವ ಅಧಿಕಾರವೇ ನನಗಿಲ್ಲ.. ಆ ಅಧಿಕಾರ ಇರೋದು ಸಿಎಂಗೆ ಮಾತ್ರ. ಈ ಲಂಚದ ಆರೋಪ ಸುಳ್ಳು ಅಂತ ಧರ್ಮಸ್ಥಳದಲ್ಲೂ ಪ್ರಮಾಣ ಮಾಡೋಕೆ ಸಿದ್ಧ ಅಂತ ಹೇಳಿದ್ದಾರೆ.
ಸಚಿವ ಎಚ್.ನಾಗೇಶ್ ವಿರುದ್ಧದ ಲಂಚ ಆರೋಪಕ್ಕೆ ಕಾಂಗ್ರೆಸ್ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದು ಚೆಕ್, ಆರ್ಟಿಜಿಎಸ್ ಆಯ್ತು, ಇದೀಗ ಕ್ಯಾಶ್ ಸರದಿ ಅಂತ ವ್ಯಂಗ್ಯ ಮಾಡಿದೆ.
-masthmagaa.com
Contact Us for Advertisement