ದೇವೇಗೌಡ್ರು ಸಗಣಿ ಬಾಚಿದ್ದಾರೆ.. ನಿಂಗೇನೋ ಗೊತ್ತು..?: ಸಿದ್ದುಗೆ ಎಚ್​​ಡಿಕೆ ಡಿಚ್ಚಿ

masthmagaa.com:

ಬೆಂಗಳೂರು: ಮಾಜಿ ಸಿಎಂಗಳಾದ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ನಡುವಿನ ಏಕವಚನದ ವಾಕ್ಸಮರ ಮುಂದುವರೆದಿದೆ. ರೈತರ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಸಿದ್ದರಾಮಯ್ಯ, ಕೃಷಿ ಕಾನೂನಿನ ವಿಚಾರದಲ್ಲಿ ಸರ್ಕಾರದ ಪರವಾಗಿ ಮಾತನಾಡಿದ್ದ ಕುಮಾರಸ್ವಾಮಿ ವಿರುದ್ಧ ಏಕವಚನದಲ್ಲಿ ಕಿಡಿಕಾರಿದ್ರು. ಏನ್‌ ಕುಮಾರಸ್ವಾಮಿ ನಿನಗೆ ನಾಚಿಗೆ ಆಗಲ್ವಾ..? ಮಣ್ಣಿನ ಮಕ್ಕಳು ಅಂತ ಹೇಳಿಕೊಂಡು ರೈತರ ಬಾಯಿಗೆ ಮಣ್ಣು ಹಾಕಿದ್ರಿ ಅಂತ ಹೇಳಿದ್ರು.

ಅದಕ್ಕೆ ಇವತ್ತು ತಿರುಗೇಟು ಕೊಟ್ಟಿರೋ ಮಾಜಿ ಸಿಎಂ ಕುಮಾರಸ್ವಾಮಿ, ನಾನು ನಿನಗಿಂತ ಡಬಲ್‌ ಏಕವಚನದಲ್ಲಿ ಮಾತಾಡ್ತೀನಿ. ಯಾಕಂದ್ರೆ ನಾನು ಹಳ್ಳಿಯವನು. ಆದ್ರೆ ಏಕವಚನದಲ್ಲಿ ಮಾತಾಡೋದು ಸಾಧನೆಯಲ್ಲ. ನಾನು ನಾಚಿಕೆ ಪಡುವ ಅವಶ್ಯಕತೆನೂ ಇಲ್ಲಾ. ಯಾಕಂದ್ರೆ ನಾನು ನಿಮ್ಮ ಹಾಗೆ ಯಾವುದೇ ಡಬಲ್‌ ಗೇಮ್‌ ರಾಜಕೀಯ ಮಾಡಿಲ್ಲಾ. ದೇವೇಗೌಡರು ಕೃಷಿ ಮಾಡಿದ್ದಾರೆ, ಸಗಣಿ ಬಾಚಿದ್ದಾರೆ.. ಅವರ ಇತಿಹಾಸ ನಿನಗೇನು ಗೊತ್ತು..? ಅಪ್ಪ ಮಕ್ಕಳದ್ದು ಕಣ್ಣೀರು ಹಾಕೋ ಸಂಸ್ಕೃತಿ ಅಂತಾರೆ.. ನೀನು ಡಿಸಿಎಂ ಆಗಿ ಸೋತ ನಂತರ ದೇವೇಗೌಡರ ಮುಂದೆ ಬಂದು ಕಣ್ಣೀರು ಹಾಕಿದ್ದಿ.. ಆದ್ರೆ ನಾವು ಜನರ ಕಷ್ಟ ನೋಡಿ ಕಣ್ಣೀರು ಹಾಕ್ತೀವಿ ಅಂತ ಸರಿಯಾಗೇ ಗುನ್ನ ಕೊಟ್ಟಿದ್ದಾರೆ.

-masthmagaa.com

Contact Us for Advertisement

Leave a Reply