ರಾಜ್ಯದಲ್ಲಿ ಕೊರೋನಾ 2ನೇ ಅಲೆ..! ಸುಧಾಕರ್ ಎಚ್ಚರಿಕೆ

masthmagaa.com:

ಈ ನಡುವೆ ಕರ್ನಾಟಕದಲ್ಲೂ ಕೊರೋನಾದ 2ನೇ ಅಲೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಅಂತ ಆರೋಗ್ಯ ಸಚಿವ ಡಾ.ಸುಧಾಕರ್ ಎಚ್ಚರಿಸಿದ್ದಾರೆ. ನೆರೆ ರಾಷ್ಟ್ರಗಳಲ್ಲಿ ಕೊರೋನಾ ಹೆಚ್ಚಳದ ಬಗ್ಗೆ ಮಾತನಾಡಿದ ಅವರು, ಕೊರೋನಾ ಶುರುವಾದ ಸಮಯದಲ್ಲಿ ಇದ್ದ ಭಯ ಈಗ ಜನರಲ್ಲಿಲ್ಲ.. ಕೊರೋನಾ ಈಗ ಇಲ್ವೇ ಇಲ್ಲ ಅನ್ನೋ ರೀತಿ ಜನ ವರ್ತಿಸ್ತಿದ್ದಾರೆ.

ಈ ರೀತಿ ಮೈಮರೆತರೆ ಅಪಾಯ ಗ್ಯಾರಂಟಿ ಅಂದ್ರು. ಲಾಕ್​ಡೌನ್ ಮಾಡೋದಿಲ್ಲ.. ಆದ್ರೂ ಕೂಡ ಜನ ಹುಷಾರಾಗಿ ಇರಬೇಕು.. ಮಹಾರಾಷ್ಟ್ರ ಮತ್ತು ಕೇರಳ ಗಡಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಅಲ್ಲಿಂದ ಬರುವವರಿಗೆ ಆರ್​ಟಿಪಿಸಿಆರ್ ಪ್ರಮಾಣ ಪತ್ರ, ಅಂದ್ರೆ ಕೊರೋನಾ ಪರೀಕ್ಷೆ ಮಾಡಿಸಿ ನೆಗೆಟಿವ್ ಅಂತ ಬಂದಿರೋ ವರದಿ ಕಡ್ಡಾಯಗೊಳಿಸಲಾಗಿದೆ ಅಂತ ಮಾಹಿತಿ ನೀಡಿದ್ರು.

-masthmagaa.com

Contact Us for Advertisement

Leave a Reply