masthmagaa.com:

ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಬ್ಯಾಂಕ್ ಖಾತೆಗಳಿಂದ ಅಪಾರ ಪ್ರಮಾಣದ ಹಣವನ್ನ ಖದೀಮರು ವಿತ್​ಡ್ರಾ ಮಾಡಿಕೊಂಡಿದ್ದಾರೆ. ನಕಲಿ ಚೆಕ್​ಗಳನ್ನ ಬಳಸಿಕೊಂಡು ಲಖನೌನ ಎರಡು ಬ್ಯಾಂಕ್​ಗಳಿಂದ ಹಣವನ್ನು ಡ್ರಾ ಮಾಡಲಾಗಿದೆ ಅಂತ ಮೂಲಗಳು ತಿಳಿಸಿವೆ.

ಮೂರನೇ ಬಾರಿ ಹಣ ವಂಚಿಸಲು ಪ್ರಯತ್ನಿಸುವಾಗ ಈ ವಿಚಾರ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಗಮನಕ್ಕೆ ಬಂದಿದೆ. ಪ್ರಕರಣ ಸಂಬಂಧ ಅಯೋಧ್ಯೆ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದ್ದು, ವಂಚಕರಿಗಾಗಿ ಬಲೆ ಬೀಸಲಾಗಿದೆ.

ಅಂದ್ಹಾಗೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯವನ್ನು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರವೇ ವಹಿಸಿಕೊಂಡಿದೆ. ಹೀಗಾಗಿ ದೇಣಿಗೆ ರೂಪದಲ್ಲಿ ಸಾಕಷ್ಟು ಹಣ ಬ್ಯಾಂಕ್​ ಖಾತೆಗೆ ಹರಿದು ಬಂದಿರುವ ಸಾಧ್ಯತೆ ಇರುತ್ತದೆ. ಆದ್ರೆ ವಂಚಕರು ಇದನ್ನು ಬಿಡದೇ ಹಣವನ್ನು ದೋಚಿದ್ದಾರೆ. ಎಷ್ಟು ಹಣ ಅಂತ ಇನ್ನೂ ಗೊತ್ತಾಗಿಲ್ಲ.

-masthmagaa.com

Contact Us for Advertisement

Leave a Reply