masthmagaa.com:
ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಬ್ಯಾಂಕ್ ಖಾತೆಗಳಿಂದ ಅಪಾರ ಪ್ರಮಾಣದ ಹಣವನ್ನ ಖದೀಮರು ವಿತ್ಡ್ರಾ ಮಾಡಿಕೊಂಡಿದ್ದಾರೆ. ನಕಲಿ ಚೆಕ್ಗಳನ್ನ ಬಳಸಿಕೊಂಡು ಲಖನೌನ ಎರಡು ಬ್ಯಾಂಕ್ಗಳಿಂದ ಹಣವನ್ನು ಡ್ರಾ ಮಾಡಲಾಗಿದೆ ಅಂತ ಮೂಲಗಳು ತಿಳಿಸಿವೆ.
ಮೂರನೇ ಬಾರಿ ಹಣ ವಂಚಿಸಲು ಪ್ರಯತ್ನಿಸುವಾಗ ಈ ವಿಚಾರ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಗಮನಕ್ಕೆ ಬಂದಿದೆ. ಪ್ರಕರಣ ಸಂಬಂಧ ಅಯೋಧ್ಯೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ವಂಚಕರಿಗಾಗಿ ಬಲೆ ಬೀಸಲಾಗಿದೆ.
ಅಂದ್ಹಾಗೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯವನ್ನು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರವೇ ವಹಿಸಿಕೊಂಡಿದೆ. ಹೀಗಾಗಿ ದೇಣಿಗೆ ರೂಪದಲ್ಲಿ ಸಾಕಷ್ಟು ಹಣ ಬ್ಯಾಂಕ್ ಖಾತೆಗೆ ಹರಿದು ಬಂದಿರುವ ಸಾಧ್ಯತೆ ಇರುತ್ತದೆ. ಆದ್ರೆ ವಂಚಕರು ಇದನ್ನು ಬಿಡದೇ ಹಣವನ್ನು ದೋಚಿದ್ದಾರೆ. ಎಷ್ಟು ಹಣ ಅಂತ ಇನ್ನೂ ಗೊತ್ತಾಗಿಲ್ಲ.
-masthmagaa.com
Contact Us for Advertisement