ಸಿಎಂ ಆಗಬೇಕೆಂಬ ಆಸೆ ಇರ್ಲಿಲ್ಲ: ಕುತೂಹಲ ಮೂಡಿಸಿದ ನಿತೀಶ್ ಹೇಳಿಕೆ

masthmagaa.com:

ಜೆಡಿಯು ಪಕ್ಷದಲ್ಲಿ ಕಳೆದ ಕೆಲ ದಿನಗಳಿಂದ ಮಹತ್ವದ ಬೆಳವಣಿಗೆಗಳು ಆಗ್ತಿವೆ. ಇತ್ತೀಚೆಗಷ್ಟೇ ಅರುಣಾಚಲ ಪ್ರದೇಶದದಲ್ಲಿ 6 ಜನ ಜೆಡಿಯು ಶಾಸಕರು ಬಿಜೆಪಿಗೆ ಪಕ್ಷಾಂತರವಾದ್ರೆ, ನಿನ್ನೆಯಷ್ಟೇ ಜೆಡಿಯು ಪಕ್ಷದ ಅಧ್ಯಕ್ಷರಾಗಿ ಆರ್.ಸಿ.ಪಿ. ಸಿಂಗ್ ಅವರನ್ನ ಆಯ್ಕೆ ಮಾಡಲಾಯ್ತು. ಇವತ್ತು ಮಾತನಾಡಿರುವ ಬಿಹಾರ ಸಿಎಂ ನಿತೀಶ್ ಕುಮಾರ್, ‘ನನಗೆ ಆಗಬೇಕೆಂಬ ಆಸೆಯೇ ಇರಲಿಲ್ಲ. ಸಿಎಂ ಹುದ್ದೆಗೆ ಬಿಜೆಪಿಯವರು ತಮ್ಮದೇ ಅಭ್ಯರ್ಥಿಯನ್ನ ನೇಮಿಸಬಹುದಿತ್ತು’ ಅಂತ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ಸುಶೀಲ್‌ ಕುಮಾರ್‌ ಮೋದಿ, ‘ನಿತೀಶ್‌ ಕುಮಾರ್‌ ಸಿಎಂ ಆಗಬೇಕು ಅಂತ ಇಷ್ಟಪಟ್ಟಿರಲಿಲ್ಲ. ಆದ್ರೆ ನಿಮ್ಮ ಹೆಸರಲ್ಲೇ ಚುನಾವಣೆ ಎದುರಿಸಿದ್ದೇವೆ. ಜನ ನಿಮಗಾಗಿ ವೋಟ್ ಹಾಕಿದ್ದಾರೆ ಅಂತ ಬಿಜೆಪಿ-ಜೆಡಿಯು ನಾಯಕರು ಹೇಳಿದ್ರು. ಬಳಿಕ ಅವರು ಸಿಎಂ ಆಗೋಕೆ ಒಪ್ಪಿಕೊಂಡ್ರು’ ಎಂದಿದ್ದಾರೆ.

-masthmagaa.com

Contact Us for Advertisement

Leave a Reply