ಮಧ್ಯಪ್ರದೇಶ ಕಾಂಗ್ರೆಸ್​​​ಗೆ ಆಪತ್ಬಾಂಧವ ಆದ ಕೊರೋನಾ..!

masthmagaa.com:

ಮಧ್ಯಪ್ರದೇಶದ ಕಾಂಗ್ರೆಸ್ ಸರ್ಕಾರಕ್ಕೆ ಕೊರೋನಾ ವೈರಸ್ ಆಪತ್ಬಾಂಧವ ರೀತಿ ಆಗ್ತಿದೆ. ಯಾಕಂದ್ರೆ ಜ್ಯೋತಿರಾದಿತ್ಯ ಸಿಂಧಿಯಾ ಕೈಕೊಟ್ಟಿದ್ದು, 22 ಮಂದಿ ಶಾಸಕರು ರಾಜೀನಾಮೆ ನೀಡಿದ್ದಾರೆ. ಕಮಲ್​​ನಾಥ್ ನೇತೃತ್ವದ ಸರ್ಕಾರ ಉರುಳುವ ಭೀತಿ ಶುರುವಾಗಿದೆ. ಈ ನಡುವೆ ಮಾರ್ಚ್​ 16ರಿಂದ ಶುರುವಾಗಲಿರುವ ಅಧಿವೇಶನದಲ್ಲಿ ವಿಶ್ವಾಸಮತ ಸಾಬೀತುಪಡಿಸುವಂತೆ ಪಟ್ಟು ಹಿಡಿಯಲು ಬಿಜೆಪಿ ಪ್ಲಾನ್ ಮಾಡಿಕೊಂಡಿದೆ. ಆದ್ರೆ ಈಗ ಕೊರೋನಾ ವೈರಸ್ ಕಾರಣವನ್ನು ನೀಡಿ ಅಧಿವೇಶನವನ್ನು ಮುಂದೂಡಲು ಕಮಲ್​​​ನಾಥ್ ಸರ್ಕಾರ ಪ್ಲಾನ್ ಮಾಡ್ತಿದೆ.

ಈಗಾಗಲೇ 22 ಮಂದಿ ಶಾಸಕರ ರಾಜೀನಾಮೆ ಸ್ಪೀಕರ್​​​್ ಬಳಿ ತಲುಪಿದ್ದು, ಎಲ್ಲಾ ಶಾಸಕರು ತಮ್ಮನ್ನು ಭೇಟಿಯಾಗುವಂತೆ ಸ್ಪೀಕರ್​​​ ತಿಳಿಸಿದ್ದಾರೆ. ಇತ್ತ ಕಾಂಗ್ರೆಸ್ ಕೂಡ ಸ್ಪೀಕರ್​​​, ಕಾಂಗ್ರೆಸ್ ಶಾಸಕರ ರಾಜೀನಾಮೆ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಂಡ ಬಳಿಕವಷ್ಟೇ ಸದನದಲ್ಲಿ ಬಹುಮತ ಸಾಬೀತುಪಡಿಸುತ್ತೇವೆ ಅಂತ ಪಟ್ಟು ಹಿಡಿದಿದೆ.

-masthmagaa.com

Contact Us for Advertisement

Leave a Reply