masthmagaa.com:
ಮಧ್ಯಪ್ರದೇಶದ ಕಾಂಗ್ರೆಸ್ ಸರ್ಕಾರಕ್ಕೆ ಕೊರೋನಾ ವೈರಸ್ ಆಪತ್ಬಾಂಧವ ರೀತಿ ಆಗ್ತಿದೆ. ಯಾಕಂದ್ರೆ ಜ್ಯೋತಿರಾದಿತ್ಯ ಸಿಂಧಿಯಾ ಕೈಕೊಟ್ಟಿದ್ದು, 22 ಮಂದಿ ಶಾಸಕರು ರಾಜೀನಾಮೆ ನೀಡಿದ್ದಾರೆ. ಕಮಲ್ನಾಥ್ ನೇತೃತ್ವದ ಸರ್ಕಾರ ಉರುಳುವ ಭೀತಿ ಶುರುವಾಗಿದೆ. ಈ ನಡುವೆ ಮಾರ್ಚ್ 16ರಿಂದ ಶುರುವಾಗಲಿರುವ ಅಧಿವೇಶನದಲ್ಲಿ ವಿಶ್ವಾಸಮತ ಸಾಬೀತುಪಡಿಸುವಂತೆ ಪಟ್ಟು ಹಿಡಿಯಲು ಬಿಜೆಪಿ ಪ್ಲಾನ್ ಮಾಡಿಕೊಂಡಿದೆ. ಆದ್ರೆ ಈಗ ಕೊರೋನಾ ವೈರಸ್ ಕಾರಣವನ್ನು ನೀಡಿ ಅಧಿವೇಶನವನ್ನು ಮುಂದೂಡಲು ಕಮಲ್ನಾಥ್ ಸರ್ಕಾರ ಪ್ಲಾನ್ ಮಾಡ್ತಿದೆ.
ಈಗಾಗಲೇ 22 ಮಂದಿ ಶಾಸಕರ ರಾಜೀನಾಮೆ ಸ್ಪೀಕರ್್ ಬಳಿ ತಲುಪಿದ್ದು, ಎಲ್ಲಾ ಶಾಸಕರು ತಮ್ಮನ್ನು ಭೇಟಿಯಾಗುವಂತೆ ಸ್ಪೀಕರ್ ತಿಳಿಸಿದ್ದಾರೆ. ಇತ್ತ ಕಾಂಗ್ರೆಸ್ ಕೂಡ ಸ್ಪೀಕರ್, ಕಾಂಗ್ರೆಸ್ ಶಾಸಕರ ರಾಜೀನಾಮೆ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಂಡ ಬಳಿಕವಷ್ಟೇ ಸದನದಲ್ಲಿ ಬಹುಮತ ಸಾಬೀತುಪಡಿಸುತ್ತೇವೆ ಅಂತ ಪಟ್ಟು ಹಿಡಿದಿದೆ.
-masthmagaa.com
Contact Us for Advertisement