masthmagaa.com:
ಸಿಎಂ ಬಸವರಾಜ ಬೊಮ್ಮಾಯಿ ಇವತ್ತು ಮೈಸೂರು ಜಿಲ್ಲೆಯ ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಿಸಿ, ಎಲ್ಲಾ ಡ್ಯಾಂಗಳು ಭರ್ತಿಯಾಗಿ ಜನ ಜಾನುವಾರುಗಳು ಸಮೃದ್ಧಿಯಾಗಲಿ ಅಂತ ಪ್ರಾರ್ಥಿಸಿದ್ರು. ಇನ್ನು ಪುನೀತ್ ರಾಜ್ಕುಮಾರ್ ಹೆಸರನ್ನ ಮರಣೋತ್ತರ ಪದ್ಮಶ್ರಿ ಪ್ರಶಸ್ತಿಗೆ ಶಿಫಾರಸು ಮಾಡಬೇಕೆಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹದ ಬಗ್ಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಪುನೀತ್ಗೆ ಪದ್ಮಶ್ರೀ ನೀಡಬೇಕು ಅನ್ನೋದನ್ನ ಎಲ್ಲರೂ ಒಪ್ಪುತ್ತಾರೆ. ಇದಕ್ಕೆ ನಮ್ಮ ಸಮ್ಮತಿ ಕೂಡ ಇದೆ. ಹೆಸರನ್ನ ಶಿಫಾರಸು ಮಾಡಲು ನಿಯಮಗಳಿವೆ. ಸರ್ಕಾರವಾಗಿ ಎಲ್ಲವನ್ನೂ ಯೋಚನೆ ಮಾಡಿ ಕ್ರಮ ಕೈಗೊಳ್ತೀವಿ ಅಂತ ಹೇಳಿದ್ರು.
-masthmagaa.com
Contact Us for Advertisement