ಕಬಿನಿ ಜಲಾಶಯಕ್ಕೆ ಬಸವರಾಜ್ ಬೊಮ್ಮಾಯಿ ಬಾಗಿನ!

masthmagaa.com:

ಸಿಎಂ ಬಸವರಾಜ ಬೊಮ್ಮಾಯಿ ಇವತ್ತು ಮೈಸೂರು ಜಿಲ್ಲೆಯ ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಿಸಿ, ಎಲ್ಲಾ ಡ್ಯಾಂಗಳು ಭರ್ತಿಯಾಗಿ ಜನ ಜಾನುವಾರುಗಳು ಸಮೃದ್ಧಿಯಾಗಲಿ ಅಂತ ಪ್ರಾರ್ಥಿಸಿದ್ರು. ಇನ್ನು ಪುನೀತ್ ರಾಜ್‌ಕುಮಾರ್​ ಹೆಸರನ್ನ ಮರಣೋತ್ತರ ಪದ್ಮಶ್ರಿ ಪ್ರಶಸ್ತಿಗೆ ಶಿಫಾರಸು ಮಾಡಬೇಕೆಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹದ ಬಗ್ಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಪುನೀತ್​ಗೆ ಪದ್ಮಶ್ರೀ ನೀಡಬೇಕು ಅನ್ನೋದನ್ನ ಎಲ್ಲರೂ ಒಪ್ಪುತ್ತಾರೆ. ಇದಕ್ಕೆ ನಮ್ಮ ಸಮ್ಮತಿ ಕೂಡ ಇದೆ. ಹೆಸರನ್ನ ಶಿಫಾರಸು ಮಾಡಲು ನಿಯಮಗಳಿವೆ. ಸರ್ಕಾರವಾಗಿ ಎಲ್ಲವನ್ನೂ ಯೋಚನೆ ಮಾಡಿ ಕ್ರಮ ಕೈಗೊಳ್ತೀವಿ ಅಂತ ಹೇಳಿದ್ರು.

-masthmagaa.com

Contact Us for Advertisement

Leave a Reply