masthmagaa.com:
ಕೊರೋನಾ ವೈರಸ್ ದೇಶದಲ್ಲಿ 3ನೇ ಹಂತಕ್ಕೆ ತಲುಪಿದೆ ಎಂದು ಗೋವಿಂದ ಕಾರಜೋಳ ಹೇಳಿದ್ದಾರೆ. ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಕೊರೋನಾ ಸೋಂಕು ದೇಶದಲ್ಲಿ 3ನೇ ಹಂತಕ್ಕೆ ಕಾಲಿಟ್ಟಿದೆ. ರಾಜ್ಯದ ಜನ ಕೂಡ ಲಾಕ್ಡೌನ್ಗೆ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ ಅಂತ ಹೇಳಿದ್ದಾರೆ.
ಆದ್ರೆ ಈವರೆಗೆ ದೇಶದಲ್ಲಿ ಕೊರೋನಾ 3ನೇ ಹಂತಕ್ಕೆ ಹೋಗಿದೆ ಅಂತ ಅಧಿಕೃತವಾಗಿ ಹೇಳಿಲ್ಲ. 2ನೇ ಹಂತದಲ್ಲಿದ್ದು, 3ನೇ ಹಂತಕ್ಕೆ ಹೋಗದಂತೆ ಲಾಕ್ ಡೌನ್ ಕೂಡ ಹೇರಲಾಗಿದೆ. ಆದ್ರೂ ಕೂಡ ಗೋವಿಂದ ಕಾರಜೋಳ ಯಾವ ಆಧಾರದಲ್ಲಿ ಕೊರೋನಾ 3ನೇ ಹಂತಕ್ಕೆ ತಲುಪಿದೆ ಎಂದು ಹೇಳಿದ್ದಾರೆ ಅನ್ನೋದು ತಿಳಿದು ಬಂದಿಲ್ಲ.
-masthmagaa.com
Contact Us for Advertisement