masthmagaa.com:
ಮೈಸೂರಿನಲ್ಲಿ ಕ್ಷಣಕ್ಷಣಕ್ಕೂ ಆತಂಕ ಹೆಚ್ಚಾಗ್ತಿದೆ. ನಂಜನಗೂಡಿನ ಜ್ಯುಬಿಲಿಯಂಟ್ನ ಐವರು ಕಾರ್ಮಿಕರಲ್ಲಿ ಕೊರೋನಾ ಪಾಸಿಟಿವ್ ಬಂದ್ಮೇಲೆ, ಜಿಲ್ಲೆಯ ವಿವಿಧ ಭಾಗಗಳಲ್ಲಿನ ಜನ ಭಯಭೀತರಾಗಿದ್ದಾರೆ. ಕಾರ್ಮಿಕರ ಮೂಲಕ ಎಲ್ಲಿ ಗ್ರಾಮೀಣ ಪ್ರದೇಶಗಳಿಗೂ ಹಬ್ಬಿ ಬಿಡುತ್ತೋ ಅನ್ನೋ ಆತಂಕದಲ್ಲಿ ಮೈಸೂರು ಜನ ಇದ್ದಾರೆ. ಹೀಗಾಗಿ ಜುಬಿಲಿಯಂಟ್ ಕಾರ್ಖಾನೆಯ 1 ಸಾವಿರಕ್ಕೂ ಹೆಚ್ಚು ಕಾರ್ಮಿಕರನ್ನು ಹೋಂ ಕ್ವಾರಂಟೈನ್ನಲ್ಲಿ ಇಡಲಾಗಿದೆ. ಆದ್ರೂ ಜನರ ಆತಂಕ ಕಡಿಮೆ ಆಗ್ತಿಲ್ಲ.
ಯಾಕಂದ್ರೆ ಜಿಲ್ಲೆಯ 3ನೇ ಸೋಂಕಿತ ವಿದೇಶದಿಂದ ಬಂದಿಲ್ಲ ಹಾಗೂ ಆತ ಯಾವ ಸೋಂಕಿತರ ಸಂಪರ್ಕದಲ್ಲೂ ಇರಲಿಲ್ಲ. ಆದ್ರೂ ಸೋಂಕು ಹರಡಿರೋದು ತಲ್ಲಣ ಸೃಷ್ಟಿಸಿದೆ. ಈ ಬಗ್ಗೆ ಸರಿಯಾದ ಮಾಹಿತಿ ಕೂಡ ಲಭ್ಯವಾಗಿಲ್ಲ. ಈ ಒಬ್ಬ ಸೋಂಕಿತ ಎಲ್ಲಿ ಇಡೀ ಮೈಸೂರಿಗೆ ಗಂಡಾಂತರ ತಂದೊಡ್ಡುತ್ತಾನೋ ಅನ್ನೋ ಭಯ ಎಲ್ಲರನ್ನೂ ಕಾಡುತ್ತಿದೆ.
-masthmagaa.com
Contact Us for Advertisement