masthmagaa.com:
ರಾಜ್ಯದಲ್ಲಿ ಪ್ರತಿದಿನವೂ ಕೊರೋನಾ ಸೋಂಕಿತರ ಸಂಖ್ಯೆ ಜಾಸ್ತಿಯಾಗುತ್ತಲೇ ಇದೆ. ಇಂದು ಒಂದೇ ದಿನ 17 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 277ಕ್ಕೆ ಏರಿಕೆಯಾಗಿದೆ.
ಶಾಕಿಂಗ್ ವಿಚಾರ ಅಂದ್ರೆ ಇಂದು ಪತ್ತೆಯಾದ ಸೋಂಕಿತರಲ್ಲಿ 10 ಮಂದಿ ಮೈಸೂರಿನವರೇ ಆಗಿದ್ದಾರೆ. ಅದ್ರಲ್ಲೂ 9 ಮಂದಿ ನಂಜನಗೂಡಿನ ಜ್ಯುಬಿಲಿಯೆಂಟ್ ಕಾರ್ಖಾನೆಯ ನೌಕರರೇ ಆಗಿದ್ದಾರೆ.
ಇನ್ನು ಬಾಗಲಕೋಟೆಯ ಇಬ್ಬರಲ್ಲಿ ಸೋಂಕು ಪತ್ತೆಯಾಗಿದ್ದು, ಅವರಲ್ಲಿ ಓರ್ವ ಕರ್ತವ್ಯ ನಿರತ ಪೊಲೀಸ್ ಪೇದೆ ಕೂಡ ಸೇರಿದ್ದಾರೆ.
ವಿಜಯಪುರದ ಇಬ್ಬರು, ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರದ ತಲಾ ಒಬ್ಬರಲ್ಲಿ ಸೋಂಕು ಪತ್ತೆಯಾಗಿದೆ. ಇನ್ನು ಕಲಬುರಗಿಯ ಒಂದು ವರ್ಷದ ಮಗುವಿಗೂ ಈ ಮಹಾಮಾರಿ ಸೋಂಕು ತಗುಲಿದೆ.
ಇನ್ನು ನಿನ್ನೆ ಸಂಜೆಯಿಂದ ಈವರೆಗೆ ಇಬ್ಬರು ಮೃತಪಟ್ಟಿದ್ದು, ಕೊರೋನಾಗೆ ಬಲಿಯಾದವರ ಸಂಖ್ಯೆ ರಾಜ್ಯದಲ್ಲಿ 11ಕ್ಕೆ ಏರಿಕೆಯಾಗಿದೆ.
-masthmagaa.com
Contact Us for Advertisement