ಜೆಡಿಎಸ್ ಎಂಎಲ್​ಸಿ ಶ್ರೀಕಂಠೇಗೌಡ ಮತ್ತವರ ಪುತ್ರನ ವಿರುದ್ಧ ಎಫ್​ಐಆರ್​​

masthmagaa.com:

ಮಂಡ್ಯ: ಕೊರೋನಾ ಪರೀಕ್ಷೆ ವೇಳೆ ಗೂಂಡಾಗಿರಿ ನಡೆಸಿದ್ದ ಜೆಡಿಎಸ್ ಎಂಎಲ್​ಸಿ ಶ್ರೀಕಂಠೇಗೌಡ ವಿರುದ್ಧ ಮಂಡ್ಯ ಪಶ್ಚಿಮ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ. ವೈದ್ಯಕೀಯ ಸಿಬ್ಬಂದಿ ಮತ್ತು ಪತ್ರಕರ್ತರ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ವಿವಿಧ ಸೆಕ್ಷನ್​ ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ. ಎಫ್​ಐಆರ್​ನಲ್ಲಿ ಎ1 ಆರೋಪಿ ಜೆಡಿಎಸ್ ಎಂಎಲ್​ಸಿ ಶ್ರೀಕಂಠೇಗೌಡರೇ ಆಗಿದ್ದಾರೆ. ನಂತರ ಅವರ ಮಗ ಕೃಷಿಕ್​ ಎ-2 ಆರೋಪಿಯಾಗಿದ್ದಾರೆ. ಇವರ ಜೊತೆಗೆ ಇನ್ನೂ ಮೂವರ ವಿರುದ್ಧ ಕೇಸ್ ದಾಖಲಿಸಲಾಗಿದೆ.

ಇಂದು ಅಂಬೇಡ್ಕರ್ ಭವನದಲ್ಲಿ ಪತ್ರಕರ್ತರ ಕೊರೋನಾ ಪರೀಕ್ಷೆಯನ್ನು ಆಯೋಜಿಸಲಾಗಿತ್ತು. ಆದ್ರೆ ಈ ವೇಳೆ ಸ್ಥಳಕ್ಕೆ ಬಂದ ಎಂಎಲ್​ಸಿ ಶ್ರೀಕಂಠೇಗೌಡ ಮತ್ತು ಅವರ ಮಗ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಕೊರೋನಾ ಹರಡೋಕೆ ಇಲ್ಲಿಗೆ ಬಂದಿದ್ದೀರಾ ಅಂತ ಕಿಡಿಕಾರಿದ್ದಾರೆ. ಈ ವೇಳೆ ವಾಗ್ವಾದ ನಡೆದು ಶ್ರೀಕಂಠೇಗೌಡರ ಪುತ್ರ ಹಲ್ಲೆಗೆ ಯತ್ನಿಸಿದ್ದಾನೆ. ತಕ್ಷಣವೇ ಪೊಲೀಸರು ಶ್ರೀಕಂಠೇಗೌಡರ ಮಗ ಕೃಷಿಕ್​​ನನ್ನು ವಶಕ್ಕೆ ಪಡೆದಿದ್ದರು.

-masthmagaa.com

Contact Us for Advertisement

Leave a Reply