masthmagaa.com:
‘ರಾಜ್ಯದಲ್ಲಿ ಲವ್ ಜಿಹಾದ್ ಅನ್ನು ಹೇಗಾದ್ರೂ ಮಾಡಿ ಬ್ಯಾನ್ ಮಾಡೇ ಮಾಡ್ತೀವಿ. ಇದನ್ನ ವಿರೋಧಿಸೋಕೆ ಸಿದ್ದರಾಮಯ್ಯ ಯಾರು?’ ಅಂತ ಕಂದಾಯ ಸಚಿವ ಆರ್. ಅಶೋಕ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ‘ರಾಜ್ಯದಲ್ಲಿರೋದು ಸಿದ್ದರಾಮಯ್ಯ ಸರ್ಕಾರ ಅಲ್ಲ, ಬಿಜೆಪಿ ಸರ್ಕಾರ. ಹೀಗಾಗಿ ಲವ್ ಜಿಹಾದ್ನಲ್ಲಿ ಭಾಗವಹಿಸುವ ಎಲ್ಲರನ್ನ ಜೈಲಿಗೆ ಹಾಕ್ತೀವಿ. ಅವರನ್ನ ಕೇಂದ್ರ ಕಾರಾಗೃಹಕ್ಕೆ ಕಳಿಸ್ತೀವಿ’ ಅಂತ ಆರ್. ಅಶೋಕ್ ಹೇಳಿದ್ದಾರೆ. ಇತ್ತೀಚೆಗೆ ಸಿಎಂ ಯಡಿಯೂರಪ್ಪ ಮಾತನಾಡಿ, ರಾಜ್ಯದಲ್ಲಿ ಲವ್ ಜಿಹಾದ್ ತಡೆ ಕಾನೂನು ಜಾರಿಗೆ ತರ್ತೀವಿ ಅಂತ ಹೇಳಿದ್ದರು. ಇದಾದ ಬಳಿಕ ರಾಜಕೀಯ ನಾಯಕರ ನಡುವೆ ಆರೋಪ-ಪ್ರತ್ಯಾರೋಪದ ದೊಡ್ಡ ಯುದ್ಧವೇ ನಡೀತಿದೆ. ಇದರ ನಡುವೆಯೇ ‘ಕ್ರಾಸ್ ಬ್ರೀಡ್’ ವಿಚಾರ ಕೂಡ ಮುನ್ನೆಲೆಗೆ ಬಂದಿತ್ತು.
-masthmagaa.com
Contact Us for Advertisement