masthmagaa.com:
ಕೇರಳ: ಆಟದ ವೇಳೆ ವಿವಾದ ಉಂಟಾಗಿ ಗೆಳೆಯರೇ ಯುವಕನನ್ನು ಕೊಂದು, ರಬ್ಬರ್ ತೋಟದಲ್ಲಿ ಹೂತು ಹಾಕಿದ್ದಾರೆ. ಕೇರಳದ ಪಟ್ಟನಂತಿಟ್ಟಾದಲ್ಲಿ ಈ ಭಯಾನಕ ಘಟನೆ ವರದಿಯಾಗಿದೆ. ಮೃತನನ್ನುಅಂಗಡಿಕ್ಕಲ್ ಮೂಲದ, 16 ವರ್ಷದ ಅಖಿಲ್ ಎಂದು ಗುರುತಿಸಲಾಗಿದೆ.
ಭಾನುವಾರ ಆಟವಾಡುವಾಗ ಗೆಳೆಯರ ನಡುವೆಯೇ ಜಗಳವಾಗಿದೆ. ಈ ವೇಳೆ ಇಬ್ಬರು ಸ್ನೇಹಿತರು ಅಖಿಲ್ನನ್ನು ಕೊಡಲಿಯಿಂದ ಕೊಚ್ಚಿ ಕೊಲೆಗೈದಿದ್ದಾರೆ. ನಂತರ ಮೃತದೇಹವನ್ನು ರಬ್ಬರ್ ಪ್ಲಾಂಟೇಷನ್ಗೆ ತಂದು ಹೂತು ಹಾಕಿದ್ದಾರೆ. ಸದ್ಯ ಪ್ರಕರಣ ಸಂಬಂಧ ಪೊಲೀಸರು ಅಖಿಲ್ನ ಇಬ್ಬರು ಗೆಳೆಯರನ್ನು ವಶಕ್ಕೆ ಪಡೆದಿದ್ದಾರೆ.
-masthmagaa.com
Contact Us for Advertisement