ಆಟದಲ್ಲಿ ಜಗಳ…ಕೊಚ್ಚಿ ಕೊಂದು, ರಬ್ಬರ್​ ತೋಟ​​ದಲ್ಲಿ ಹೆಣ ಹೂತರು..!

masthmagaa.com:

ಕೇರಳ: ಆಟದ ವೇಳೆ ವಿವಾದ ಉಂಟಾಗಿ ಗೆಳೆಯರೇ ಯುವಕನನ್ನು ಕೊಂದು, ರಬ್ಬರ್ ತೋಟದಲ್ಲಿ ಹೂತು ಹಾಕಿದ್ದಾರೆ. ಕೇರಳದ ಪಟ್ಟನಂತಿಟ್ಟಾದಲ್ಲಿ ಈ ಭಯಾನಕ ಘಟನೆ ವರದಿಯಾಗಿದೆ. ಮೃತನನ್ನುಅಂಗಡಿಕ್ಕಲ್ ಮೂಲದ, 16 ವರ್ಷದ ಅಖಿಲ್ ಎಂದು ಗುರುತಿಸಲಾಗಿದೆ.

ಭಾನುವಾರ ಆಟವಾಡುವಾಗ ಗೆಳೆಯರ ನಡುವೆಯೇ ಜಗಳವಾಗಿದೆ. ಈ ವೇಳೆ ಇಬ್ಬರು ಸ್ನೇಹಿತರು ಅಖಿಲ್​ನನ್ನು ಕೊಡಲಿಯಿಂದ ಕೊಚ್ಚಿ ಕೊಲೆಗೈದಿದ್ದಾರೆ. ನಂತರ ಮೃತದೇಹವನ್ನು ರಬ್ಬರ್ ಪ್ಲಾಂಟೇಷನ್​​​​ಗೆ ತಂದು ಹೂತು ಹಾಕಿದ್ದಾರೆ. ಸದ್ಯ ಪ್ರಕರಣ ಸಂಬಂಧ ಪೊಲೀಸರು ಅಖಿಲ್​ನ ಇಬ್ಬರು ಗೆಳೆಯರನ್ನು ವಶಕ್ಕೆ ಪಡೆದಿದ್ದಾರೆ.

-masthmagaa.com

Contact Us for Advertisement

Leave a Reply