ಟಿಪ್ಪು ಹುಲಿ ಅಲ್ಲ….ಗುಳ್ಳೇನರಿ: ಬಿಜೆಪಿ ಶಾಸಕ ಕೆಂಡ

ಟಿಪ್ಪು ಸುಲ್ತಾನ್ ಇತಿಹಾಸವನ್ನು ಪಠ್ಯ ಪುಸ್ತಕದಿಂದ ಕೈ ಬಿಡುವ ವಿಚಾರ ಇದೀಗ ರಾಜ್ಯ ರಾಜಕೀಯದಲ್ಲಿ ವಿವಾದದ ಕೇಂದ್ರ ಬಿಂದುವಾಗಿದೆ. ಆದ್ರೆ ಸಿಎಂ ಯಡಿಯೂರಪ್ಪ ಅವರ ನಡೆಯನ್ನು ಶಾಸಕ ಅಪ್ಪಚ್ಚುರಂಜನ್ ಸ್ವಾಗತಿಸಿದ್ದಾರೆ. ನಮ್ಮ ಮನವಿ ಮೇರೆಗೆ ಯಡಿಯೂರಪ್ಪನವರು ಟಿಪ್ಪು ಜಯಂತಿ ಆಚರಣೆಯನ್ನು ರದ್ದು ಮಾಡಿದ್ದಾರೆ. ಈಗ ಪಠ್ಯದಿಂದಲೂ ಟಿಪ್ಪು ಸುಲ್ತಾನ್ ಇತಿಹಾಸ ತೆಗೆದುಹಾಕಲು ಹೊರಟಿರೋದು ಸ್ವಾಗತಾರ್ಹ ಎಂದು ಹೇಳಿದ್ದಾರೆ. ಜೊತೆಗೆ ನಾವು ಓದುವಾಗ 7ನೇ ತರಗತಿಯಲ್ಲಿ ಟಿಪ್ಪು ಬಗ್ಗೆ ಪಾಠವಿತ್ತು. ಹುಲಿಯಂತೆ ಬಿಂಬಿಸಿದ್ದರು. ಆದ್ರೆ ಟಿಪ್ಪು ಹುಲಿಯಲ್ಲ ಮೈಸೂರಿನ ಗುಳ್ಳೇನರಿ ಅನ್ನೋದು ನಾವು ದೊಡ್ಡವರಾದ ಬಳಿಕ ಗೊತ್ತಾಯಿತು ಎಂದು ಹೇಳಿದ್ದಾರೆ. ಮಡಿಕೇರಿಯಲ್ಲಿ ಹಿಂದೂ ಮತ್ತು ಕ್ರಿಶ್ಚಿಯನ್ನರಿಗೆ ಹಿಂಸೆ ಕೊಟ್ಟಿದ್ದ ಟಿಪ್ಪು, ಹಲವಾರು ದೇವಾಲಯಗಳನ್ನು ನಾಶ ಮಾಡಿದ್ದ. ಹೀಗಾಗಿ ಪಠ್ಯದಲ್ಲಿ ಇರುವ ಯೋಗ್ಯತೆ ಟಿಪ್ಪು ಸುಲ್ತಾನ್​​ಗೆ ಇಲ್ಲ ಎಂದು ಹೇಳಿದ್ದಾರೆ..

ಇನ್ನು ಟಿಪ್ಪು ಸುಲ್ತಾನ್ ಇತಿಹಾಸವನ್ನು ಪಠ್ಯದಿಂದ ತೆಗೆಯುವ ವಿಚಾರವಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ನೇತೃತ್ವದಲ್ಲಿ ಇದೇ ನವೆಂಬರ್ 7ರಂದು ಸಭೆ ನಡೆಯಲಿದೆ.

Contact Us for Advertisement

Leave a Reply