masthmagaa.com:
ಪಶ್ಚಿಮ ಬಂಗಾಳ: ಕೊರೋನಾ ವೈರಸ್ಗೆ ತುತ್ತಾಗಿ ನಿನ್ನೆ ಕೋಲ್ಕತ್ತಾದಲ್ಲಿ ಸಾವನ್ನಪ್ಪಿದ ವ್ಯಕ್ತಿಯ ಅಂತ್ಯ ಸಂಸ್ಕಾರವನ್ನು ತಡರಾತ್ರಿ ನೆರವೇರಿಸಲಾಯ್ತು. ಆದ್ರೆ ಕೊರೋನಾ ಪೀಡಿತ ವ್ಯಕ್ತಿಯ ಅಂತ್ಯಸಂಸ್ಕಾರದಿಂದ ವೈರಸ್ ಹರಡುತ್ತೆ ಅಂತ ವದಂತಿ ಹಿನ್ನೆಲೆಯಲ್ಲಿ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ರು. ಈ ವೇಳೆ ಪೊಲೀಸರ ಜೊತೆ ನೂಕಾಟ, ತಳ್ಳಾಟ ಕೂಡ ನಡೀತು. ನಂತರ ಅಂತಿಮವಾಗಿ ತಡರಾತ್ರಿ 10.30ಕ್ಕೆ ವ್ಯಕ್ತಿಯ ಅಂತ್ಯಸಂಸ್ಕಾರ ನೆರವೇರಿಸಲಾಯ್ತು.
ಮೃತ ವ್ಯಕ್ತಿಯ ಪುತ್ರ ಅಮೆರಿಕಾದಲ್ಲಿದ್ದು, ತಮ್ಮ ತಂದೆಯ ಅಂತ್ಯಸಂಸ್ಕಾರ ನೆರವೇರಿಸುವಂತೆ ಪೊಲೀಸರಿಗೆ ಪತ್ರ ಬರೆದಿದ್ದರು. ತಾವು ಅಮೆರಿಕಾದಲ್ಲಿದ್ದು ಸದ್ಯದ ಪರಿಸ್ಥಿತಿಯಲ್ಲಿ ಬರುವಂತಿಲ್ಲ. ಅಲ್ಲದೆ ಭಾರತದಲ್ಲಿರೋ ಕುಟುಂಬದವರನ್ನು ಕೂಡ ಕ್ವಾರಂಟೈನ್ನಲ್ಲಿ ಇರಿಸಲಾಗಿದೆ. ಹೀಗಾಗಿ ಅಂತ್ಯಸಂಸ್ಕಾರ ನೆರವೇರಿಸಿ, ಕಾನೂನಿನಲ್ಲಿ ಅವಕಾಶವಿದ್ದರೆ ಅದರ ಅಸ್ತಿಯನ್ನು ನಮ್ಮ ಕುಟುಂಬದವರಿಗೆ ನೀಡಿ ಎಂದು ಮನವಿ ಮಾಡಿದ್ದರು.
-masthmagaa.com
Contact Us for Advertisement