masthmagaa.com:
ದೇಶವ್ಯಾಪಿ ಮೇ 31ರವರೆಗೆ ಲಾಕ್ಡೌನ್ ವಿಸ್ತರಣೆಯಾದ ಬೆನ್ನಲ್ಲೇ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿ ಹೊರಡಿಸಿದೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಸಿಎಂ ಯಡಿಯೂರಪ್ಪ, ಕೆಲವೊಂದು ಕ್ಷೇತ್ರಗಳಿಗೆ ವಿನಾಯಿತಿ ಘೋಷಿಸಿದ್ರು. ಇವೆಲ್ಲವೂ ನಾಳೆಯಿಂದ ರಾಜ್ಯಾದ್ಯಂತ ಜಾರಿಗೆ ಬರಲಿದೆ.
ರಾಜ್ಯದಲ್ಲಿ ಏನಿರುತ್ತೆ..? ಏನಿರಲ್ಲ..?
– ಕಂಟೈನ್ಮೆಂಟ್ ಜೋನ್ ಹೊರತುಪಡಿಸಿ ಬೇರೆಕಡೆ KSRTC, BMTC ಮತ್ತು ಖಾಸಗಿ ಬಸ್ ಸಂಚಾರ. ಆರಂಭದಲ್ಲಿ 200 ಬಸ್ಗಳ ಸಂಚಾರ.
– ಗರಿಷ್ಠ 30 ಪ್ರಯಾಣಿಕರಿಗೆ ಮಾತ್ರ ಅವಕಾಶ. ಪ್ರಯಾಣಿಕರು ಮಾಸ್ಕ್ ಧರಿಸುವುದು ಕಡ್ಡಾಯ. ಸಾಮಾಜಿಕ ಅಂತರ ಕಾಪಾಡಬೇಕು.
– ಸದ್ಯಕ್ಕೆ ಟಿಕೆಟ್ ದರ ಹೆಚ್ಚಳವಿಲ್ಲ. ಸಾರಿಗೆ ನಿಗಮಗಳಿಗೆ ಆಗುವ ನಷ್ಟವನ್ನು ರಾಜ್ಯ ಸರ್ಕಾರವೇ ಭರಿಸಲಿದೆ.
– ಬೆಂಗಳೂರಿನಲ್ಲಿ ಮೆಟ್ರೋ ಸಂಚಾರಕ್ಕೆ ಅನುಮತಿ ಇಲ್ಲ.
– ಆಟೋ, ಟ್ಯಾಕ್ಸಿಗಳ ಸಂಚಾರಕ್ಕೆ ಅವಕಾಶ. ಆದ್ರೆ ಡ್ರೈವರ್ ಬಿಟ್ಟು ಇಬ್ಬರಿಗೆ ಮಾತ್ರ ಅವಕಾಶ.
– ಮ್ಯಾಕ್ಸಿ ಕ್ಯಾಬ್ಗಳಲ್ಲಿ ಡ್ರೈವರ್ ಬಿಟ್ಟು ಮೂವರಿಗೆ ಅವಕಾಶ. ಎಲ್ಲರೂ ಮಾಸ್ಕ್ ಧರಿಸುವುದು ಕಡ್ಡಾಯ.
– ಮಾಲ್, ಸಿನಿಮಾ ಹಾಲ್, ಹೋಟೆಲ್ ಬಿಟ್ಟು ಮತ್ತೆಲ್ಲವೂ ಓಪನ್. ಚಿನ್ನ ಬೆಳ್ಳಿ ಅಂಗಡಿ, ಬಟ್ಟೆ ಅಂಗಡಿ ಕೂಡ ಓಪನ್
– ಹೋಟೆಲ್ಗಳಲ್ಲಿ ಪಾರ್ಸೆಲ್ ನೀಡಲು ಮಾತ್ರ ಅವಕಾಶ.
– ಸಲೂನ್ ಓಪನ್, ಬೀದಿಬದಿ ವ್ಯಾಪಾರಕ್ಕೂ ಅವಕಾಶ.
– ಕ್ರೀಡಾಕೂಟಕ್ಕೆ ಅವಕಾಶ. ಆದ್ರೆ ಪ್ರೇಕ್ಷಕರಿಗೆ ಅವಕಾಶವಿಲ್ಲ
– ಜಿಮ್ ಕೇಂದ್ರಗಳನ್ನು ತೆರೆಯುವಂತಿಲ್ಲ.
– ಅಂತರ್ ಜಿಲ್ಲಾ ರೈಲು ಪ್ರಯಾಣಕ್ಕೆ ಅವಕಾಶ.
– ಹೊರ ರಾಜ್ಯದಿಂದ ಬರುವ ರೈಲು ಮತ್ತು ಬಸ್ಗಳಿಗೆ ಮೇ 31ರವರೆಗೆ ನಿರ್ಬಂಧ.
– ಮದುವೆ ಸಮಾರಂಭಗಳಲ್ಲಿ ಗರಿಷ್ಠ 50 ಜನರಿಗೆ ಮಾತ್ರ ಅವಕಾಶ. ಸಾಮಾಜಿಕ ಅಂತರ ಕಾಪಾಡಬೇಕು. ಮಾಸ್ಕ್ ಧರಿಸಬೇಕು.
– ಅಂತ್ಯ ಸಂಸ್ಕಾರ ಕಾರ್ಯಕ್ರಮಗಳಲ್ಲಿ ಗರಿಷ್ಠ 20 ಜನ ಮಾತ್ರ ಭಾಗವಹಿಸಬಹುದು.
– ಕಂಟೈನ್ಮೆಂಟ್ ಜೋನ್ಗಳಲ್ಲಿ ಕಟ್ಟುನಿಟ್ಟಿನ ಕ್ರಮ. ಎಲ್ಲಾ ಮನೆಗಳ ಮೇಲೆ ನಿಗಾ. ಓಡಾಟಕ್ಕೆ ನಿರ್ಬಂಧ.
– ಬೆಳಗ್ಗೆ 7ರಿಂದ 9 ಗಂಟೆವರೆಗೆ ಮತ್ತು ಸಂಜೆ 5ರಿಂದ 7 ಗಂಟೆವರೆಗೆ ಪಾರ್ಕ್ಗಳು ಓಪನ್.
– ಪ್ರತಿ ಭಾನುವಾರ ಸಂಪೂರ್ಣ ಲಾಕ್ಡೌನ್. ಯಾವುದೇ ವಾಹನ ಓಡಾಟಕ್ಕೆ ಅವಕಾಶವಿಲ್ಲ.
– ಹೊರ ರಾಜ್ಯದಿಂದ ಬರುವವರಿಗಾಗಿ ಹಂತ ಹಂತವಾಗಿ ಬಸ್ ವ್ಯವಸ್ಥೆ. ತುಂಬಾ ಅಗತ್ಯ ಇದ್ದವರಿಗೆ ಮಾತ್ರ ಅವಕಾಶ. ಆದ್ರೆ ಸರ್ಕಾರಿ ಕ್ವಾರಂಟೈನ್ ಕಡ್ಡಾಯ.
– ಮೇ 31ರವರೆಗೆ ಜನ ಹೇಗೆ ಸಹಕರಿಸುತ್ತಾರೆ ಅನ್ನೋದನ್ನ ಗಮನಿಸಿ ಮುಂದಿನ ತೀರ್ಮಾನ.
-masthmagaa.com
Contact Us for Advertisement