ಸಿಎಂ ಯಡಿಯೂರಪ್ಪ ಅದೃಷ್ಟ ಬದಲಿಸಿದ ‘ಆ ಒಂದು ಹೆಸರು’

ಸಂಖ್ಯಾ ಶಾಸ್ತ್ರ, ಜ್ಯೋತಿಷ್ಯ, ನಾಮಬಲವನ್ನ ಅತಿಯಾಗಿ ನಂಬೋ ರಾಜಕಾರಣಿಗಳು ತಮ್ಮ ನೆಚ್ಚಿನ ಜ್ಯೋತಿಷಿಗಳು ಹೇಳುವ ಎಲ್ಲಾ ಕ್ರಮಗಳನ್ನ ಅನುಸರಿಸುತ್ತಾರೆ. ಇದರಿಂದಲೇ ಕೆಲವರಿಗೆ ಅದೃಷ್ಟದ ಬಾಗಿಲು ತೆರೆಯುತ್ತೆ. ಈಗ ಸಿಎಂ ಯಡಿಯೂರಪ್ಪ ಅವರಿಗೂ ಇದೇ ರೀತಿಯ ಅನುಭವವಾಗುತ್ತಿದೆ ಅನ್ಸುತ್ತೆ. ಯಾಕಂದ್ರೆ ಸಿಎಂ ಬಿಎಸ್​ವೈ ಈಗ ಮುಟ್ಟಿದ್ದೆಲ್ಲಾ ಚಿನ್ನ ಆಗುತ್ತಿದೆ. ತೂಗುಯ್ಯಾಲೆಯಲ್ಲಿದ್ದ ಸರ್ಕಾರ ಉಪಚುನಾವಣೆಯಲ್ಲಿ 12 ಕ್ಷೇತ್ರಗಳನ್ನ ಗೆದ್ದು ತನ್ನ ಬಲವನ್ನ ಹೆಚ್ಚಿಸಿಕೊಂಡಿದೆ. ಇದರಿಂದ ಸಿಎಂ ಕುರ್ಚಿ ಭದ್ರವಾಗಿದ್ದು, ಸರ್ಕಾರವೂ ಸುಭದ್ರವಾಗಿದೆ. ಅಂದ್ರೆ ಅದೃಷ್ಟದ ಅಲೆಯಲ್ಲಿ ಯಡಿಯೂರಪ್ಪ ತೇಲುತ್ತಿದ್ದಾರೆ ಎಂದರ್ಥ. ಇದಕ್ಕೆ ಕಾರಣವೂ ಇದೆ. ಅಂದ್ಹಾಗೆ ಯಡಿಯೂರಪ್ಪ ಐದಾರು ತಿಂಗಳ ಹಿಂದೆ ತಮ್ಮ ಇಂಗ್ಲಿಷ್​ ಹೆಸರಿನಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡಿದ್ರು. Yeddyurappa ಅಂತ ಇದ್ದ ಹೆಸರನ್ನ ಈಗ Yediyurappa ಅಂತ ಬದಲಾಯಿಸಿಕೊಂಡಿದ್ರು.

ಇದಾದ ನಂತರ 17 ಶಾಸಕರ ರಾಜೀನಾಮೆಯಿಂದಾಗಿ ಕಾಂಗ್ರೆಸ್‌-ಜೆಡಿಎಸ್ ಮೈತ್ರಿ ಸರ್ಕಾರ ಪತನಗೊಂಡಿತು. ಯಡಿಯೂರಪ್ಪಗೆ ಅಧಿಕಾರ ಒಲಿದುಬಂತು. ಶಾಸಕರು ಅನರ್ಹಗೊಂಡ ನಂತರ ವಿಧಾನಸಭೆಯಲ್ಲಿ ವಿಶ್ವಾಸಮತಯಾಚನೆ ಅನ್ನೋ ಅಗ್ನಿಪರೀಕ್ಷೆಯಲ್ಲಿ ಗೆದ್ದರು. ಅನರ್ಹ ಶಾಸಕರಿಗಾಗಿ ಸಚಿವ ಸಂಪುಟದಲ್ಲಿ ಸ್ಥಾನವನ್ನ ಮೀಸಲಿಡುವ ಮೂಲಕ ಸಂಪುಟ ರಚನೆಯಲ್ಲೂ ತಮ್ಮ ಕೈ ಮೇಲಾಗುವಂತೆ ನೋಡಿಕೊಂಡರು. ಅಗ್ನಿಪರೀಕ್ಷೆಯಾಗಿದ್ದ ಉಪ ಚುನಾವಣೆಯಲ್ಲೂ ಯಶಸ್ಸು ಸಿಕ್ಕಿದೆ. ಬಿಜೆಪಿಗೆ ಸಂಪೂರ್ಣ ಬಹುಮತ ಸಿಕ್ಕಿದೆ. ಇನ್ನು ಮೂರೂವರೆ ವರ್ಷ ಸಿಎಂ ಯಡಿಯೂರಪ್ಪ ಆಡಳಿತ ನಡೆಸಬಹುದು.

Contact Us for Advertisement

Leave a Reply