masthmagaa.com:
ಆಗಾಗ ವಿವಾದಾತ್ಮಕ ಹೇಳಿಕೆ ಕೊಡುವ ಸಚಿವ ಕೆ.ಎಸ್. ಈಶ್ವರಪ್ಪ ಇದೀಗ ಆ ಪಟ್ಟಿಗೆ ಮತ್ತೊಂದು ಹೇಳಿಕೆಯನ್ನ ಸೇರಿಸಿದ್ದಾರೆ. ಏನ್ ಹೇಳಿದ್ದಾರೆ ಅಂದ್ರೆ, ‘ನಾವು ಹಿಂದೂ ಧರ್ಮದಲ್ಲಿ ಬರುವ ಯಾವುದೇ ಸಮುದಾಯಕ್ಕೆ ಬೇಕಿದ್ರೂ ಚುನಾವಣಾ ಟಿಕೆಟ್ ಕೊಡ್ತೀವಿ. ಅದು ಲಿಂಗಾಯತರಾಗಿರಬಹುದು, ಕುರುಬರಾಗಿರಬಹುದು, ಒಕ್ಕಲಿಗರಾಗಿರಬಹುದು ಅಥವಾ ಬ್ರಾಹ್ಮಣರಾಗಿರಬಹುದು. ಆದ್ರೆ ಖಂಡಿತವಾಗಿಯೂ ಮುಸ್ಲಿಮರಿಗೆ ಟಿಕೆಟ್ ಕೊಡಲ್ಲ’ ಅಂತ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವ ಈಶ್ವರಪ್ಪ ಹೇಳಿದ್ದಾರೆ. ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಸಂಬಂಧಿಸಿದಂತೆ ಯಾರಿಗೆ ಟಿಕೆಟ್ ನೀಡ್ತೀರಿ ಅನ್ನೋ ಪ್ರಶ್ನೆಗೆ ಈ ರೀತಿ ಉತ್ತರಿಸಿದ್ದಾರೆ. ಈಶ್ವರಪ್ಪ ಅವರ ಈ ಹೇಳಿಕೆ ಈಗ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿದೆ.
ಕೆ.ಎಸ್. ಈಶ್ವರಪ್ಪ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿರುಗೇಟು ಕೊಟ್ಟಿದ್ದು, ‘ಈಶ್ವರಪ್ಪನವರು ಸಂವಿಧಾನ ಓದಬೇಕು. ಅದರಲ್ಲಿರುವ ಆಶಯ ಏನು ಅಂತ ತಿಳಿದುಕೊಳ್ಳಬೇಕು. ಬಿಜೆಪಿಯವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ. ಅವರು ಸಂವಿಧಾನ ಸುಡಬೇಕು ಅಂತಲೇ ಕಾಯುತ್ತಿದ್ದಾರೆ’ ಅಂತ ಹೇಳಿದ್ದಾರೆ.
We might give the party ticket to any community of Hindus. Whoever we might give it to — maybe Lingayats, Kurubas, Vokkaligas, or Brahmins but definitely, it will not be given to Muslims: KS Eshwarappa, Karnataka Minister & BJP leader (29.11.2020) pic.twitter.com/0cA1Lchqz4
— ANI (@ANI) November 30, 2020
-masthmagaa.com
Contact Us for Advertisement