masthmagaa.com:
ಯಾವುದು ಆಗ್ಬಾರ್ದು ಅಂದುಕೊಂಡಿದ್ವೋ ಅದು ಆಗಿದೆ. ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ಆತಂಕ ಸೃಷ್ಟಿಸಿರೋ ಒಮೈಕ್ರಾನ್ ರೂಪಾಂತರಿ ಭಾರತಕ್ಕೂ ಬಂದಿದೆ. ಅದು ಕೂಡ ಕರ್ನಾಟಕದಲ್ಲಿ. ರಾಜ್ಯದಲ್ಲಿ ಇಬ್ಬರಿಗೆ ಒಮೈಕ್ರಾನ್ ರೂಪಾಂತರಿ ಕೊರೋನಾ ವೈರಸ್ ದೃಢಪಟ್ಟಿದೆ ಅಂತ ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ. ಎರಡೂ ಕೇಸ್ ಕೂಡ ಬೆಂಗಳೂರಿನದ್ದು ಅಂತ ಬಿಬಿಎಂಪಿ ಆಯುಕ್ತರಾದ ಗೌರವ್ ಗುಪ್ತಾ ಹೇಳಿದ್ದಾರೆ. ಜೊತೆಗೆ ಎರಡು ಕೇಸ್ ಯಾವ್ದು ಅಂತ ಡಿಟೇಲಾಗಿ ಮಾಹಿತಿ ನೀಡಿದ್ದಾರೆ. ಹಾಗಿದ್ರೆ ರಾಜ್ಯಕ್ಕೆ ಒಮೈಕ್ರಾನ್ ಹೇಗೆ ಬಂತು, ಯಾರಿಗೆ ಬಂತು, ಯಾವಾಗ ಬಂತು, ಅವರು ಯಾವ ದೇಶದವರು, ಲಸಿಕೆ ಹಾಕ್ಕೊಂಡಿದ್ರಾ, ಅವರಿಂದ ಇನ್ನೆಷ್ಟು ಜನರಿಗೆ ಕೊರೋನಾ ಬಂದಿದೆ ಅಂತ ನೋಡ್ತಾ ಹೋಗಣ..
ಮೊದಲ ಕೇಸ್
ದಕ್ಷಿಣ ಆಫ್ರಿಕಾ ಪ್ರಜೆ
66 ವರ್ಷ ವಯಸ್ಸು
ನ. 20ಕ್ಕೆ ಕೆಂಪೇಗೌಡ ಏರ್ಪೋರ್ಟ್ನಲ್ಲಿ ಲ್ಯಾಂಡ್
ಏರ್ಪೋರ್ಟ್ನಲ್ಲಿ ಕೊರೋನಾ ಪರೀಕ್ಷೆ
ಪರೀಕ್ಷೆಯಲ್ಲಿ ಪಾಸಿಟಿವ್
ಹೋಟೆಲ್ನಲ್ಲಿ ವ್ಯಕ್ತಿ ಐಸೋಲೇಷನ್
ಸ್ಯಾಂಪಲ್ ಜಿನೋಮ್ ಸೀಕ್ವೆನ್ಸಿಂಗ್ಗೆ ರವಾನೆ
ಜಿನೋಮ್ ಸೀಕ್ವೆನ್ಸಿಂಗ್ ವೇಳೆ ಒಮೈಕ್ರಾನ್ ದೃಢ
ವ್ಯಕ್ತಿಯ ಸಂಪರ್ಕಕ್ಕೆ ಬಂದ 24 ಪ್ರೈಮರಿ ಕಾಂಟ್ಯಾಕ್ಟ್ಸ್
240 ಸೆಕೆಂಡರಿ ಕಾಂಟ್ಯಾಕ್ಟ್ಗಳನ್ನ ಪತ್ತೆಹಚ್ಚಲಾಗಿದೆ
ಎಲ್ಲರಿಗೂ ಕೊರೋನಾ ಪರೀಕ್ಷೆ, ಎಲ್ಲರದ್ದು ನೆಗೆಟಿವ್
ಆದ್ರೂ ಪ್ರೈಮರಿ, ಸಕೆಂಡರಿ ಕಾಂಟ್ಯಾಕ್ಟ್ಗಳ ಮೇಲೆ ನಿಗಾ
ಖಾಸಗಿ ಲ್ಯಾಬ್ನಲ್ಲಿ ಪರೀಕ್ಷೆ ಮಾಡಿಸಿದ್ದ ಸೋಂಕಿತ ವ್ಯಕ್ತಿ
ಅದರಲ್ಲಿ ಕೊರೋನಾ ನೆಗೆಟಿವ್ ಬಂದ ಹಿನ್ನೆಲೆ
ನ. 22ರಂದು ಏರ್ಪೋರ್ಟ್ ಮೂಲಕ ದುಬೈಗೆ ಹಾರಾಟ
ಕೊರೋನಾ ಲಸಿಕೆ ಹಾಕಿಸಿಕೊಂಡಿದ್ರೂ ಒಮೈಕ್ರಾನ್ ದೃಢ
ಎರಡನೇ ಕೇಸ್
ಭಾರತದ ಪ್ರಜೆ
46 ವರ್ಷ ವಯಸ್ಸು
ಬೆಂಗಳೂರಿನ ವೈದ್ಯ
ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲ
ನ. 22ನೇ ತಾರೀಖು ಸ್ಯಾಂಪಲ್ ಕಲೆಕ್ಟ್
ಕೊರೋನಾ ಪರೀಕ್ಷೆಯಲ್ಲಿ ಪಾಸಿಟಿವ್
ಸ್ಯಾಂಪಲ್ ಜಿನೋಮ್ ಸೀಕ್ವೆನ್ಸಿಂಗ್ಗೆ ರವಾನೆ
ಜಿನೋಮ್ ಸೀಕ್ವೆನ್ಸಿಂಗ್ ವೇಳೆ ಒಮೈಕ್ರಾನ್ ದೃಢ
ಆರಂಭದಲ್ಲಿ ಹೋಂ ಐಸೋಲೇಷನ್
ನಂತ್ರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ
ವ್ಯಕ್ತಿಯ ಆರೋಗ್ಯ ಸ್ಥಿರ, ಏನೂ ಸಮಸ್ಯೆ ಇಲ್ಲ
ವ್ಯಕ್ತಿಯ ಸಂಪರ್ಕಕ್ಕೆ ಬಂದ 13 ಪ್ರೈಮರಿ ಕಾಂಟ್ಯಾಕ್ಟ್ಸ್
205 ಸೆಕೆಂಡರಿ ಕಾಂಟಾಕ್ಟ್ಗಳನ್ನ ಪತ್ತೆಹಚ್ಚಲಾಗಿದೆ
ಎಲ್ಲರಿಗೂ ಕೊರೋನಾ ಪರೀಕ್ಷೆ, ಐವರಿಗೆ ಪಾಸಿಟಿವ್
ಪ್ರೈಮರಿ ಕಾಂಟ್ಯಾಕ್ಟ್ಸ್ ಮೂವರಿಗೆ ಪಾಸಿಟಿವ್
ಸೆಕೆಂಡರಿ ಕಾಂಟ್ಯಾಕ್ಟ್ಸ್ನ ಇಬ್ಬರಿಗೆ ಪಾಸಿಟಿವ್
ಐವರು ಕೂಡ ಐಸೋಲೇಷನ್ನಲ್ಲಿ
ಇವರ ಸ್ಯಾಂಪಲ್ಸ್ ಜಿನೋಮ್ ಸೀಕ್ವೆನ್ಸಿಂಗ್ಗೆ ರವಾನೆ
ವೈದ್ಯ ಲಸಿಕೆ ಹಾಕಿಸಿಕೊಂಡಿದ್ರೂ ಒಮೈಕ್ರಾನ್ ದೃಢ
ಇಲ್ಲಿ ಗಮನಿಸಬೇಕಾದ ವಿಚಾರ ಅಂದ್ರೆ ಇಬ್ಬರಿಗೂ ಎರಡೂ ಡೋಸ್ ಕೊರೋನಾ ಲಸಿಕೆ ಹಾಕಲಾಗಿತ್ತು. ಹೀಗಾಗಿ ಒಮೈಕ್ರಾನ್ ರೂಪಾಂತರಿ ವಿರುದ್ಧ ಲಸಿಕೆ ಕೆಲಸ ಮಾಡಲ್ವಾ ಅನ್ನೋ ಅನುಮಾನ ಮೂಡಿದೆ. ಮತ್ತೊಂದು ವಿಚಾರ ಅಂದ್ರೆ, ಎರಡನೇ ಕೇಸ್ ಬೆಂಗಳೂರಿನದ್ದು. ಈತ ಯಾವ ದೇಶಕ್ಕೂ ಹೋಗಿ ಬಂದಿಲ್ಲ. ಆದ್ರೂ ಒಮೈಕ್ರಾನ್ ದೃಢಪಟ್ಟಿದೆ. ಹೀಗಾಗಿ ಈತನಂತೆ ಬೇರೆಯವರಿಗೂ ಒಮೈಕ್ರಾನ್ ತಗುಲಿರುವ ಸಾಧ್ಯತೆ ಇದೆ. ಹೀಗಾಗಿ ಎಲ್ಲರೂ ಮಾಸ್ಕ್ ಹಾಕಿ, ಮುಂಜಾಗ್ರತೆ ವಹಿಸಿ ಅಂತ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತ ಹೇಳಿದ್ದಾರೆ.
-masthmagaa.com
Contact Us for Advertisement