masthmagaa.com:
ಬೆಂಗಳೂರು: ಯೋಧರೊಬ್ಬರ ಅಂತ್ಯಸಂಸ್ಕಾರಕ್ಕೆ ಅವರ ತಂದೆ-ತಾಯಿ 2,600 ಕಿಲೋ ಮೀಟರ್ವರೆಗೆ ರಸ್ತೆ ಮಾರ್ಗವಾಗಿಯೇ ಸಾಗಿದ್ದಾರೆ. 39 ವರ್ಷದ ಶೌರ್ಯಚಕ್ರ ಪ್ರಶಸ್ತಿ ವಿಜೇತ ಎನ್.ಎಸ್. ಬಾಲ್ ಎಂಬ ಯೋಧರೊಬ್ಬರು ಕ್ಯಾನ್ಸರ್ನಿಂದ ಬಳಲುತ್ತಿದ್ದರು. ಅಮೃತಸರ ಮೂಲದ ಬಾಲ್, ಬೆಂಗಳೂರಿನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ರು.
ಇವರ ಮೃತದೇಹವನ್ನು ಅಮೃತಸರಕ್ಕೆ ಕಳುಹಿಸಲು ಸೇನೆ ವ್ಯವಸ್ಥೆ ಮಾಡಿತ್ತು. ಆದ್ರೆ ಎನ್.ಎಸ್.ಬಾಲ್ ಅವರ ತಂದೆ-ತಾಯಿ ಬೆಂಗಳೂರಿನಲ್ಲೇ ತಮ್ಮ ಪುತ್ರನ ಅಂತ್ಯಸಂಸ್ಕಾರ ನೆರವೇರಿಸಬೇಕೆಂಬ ಆಸೆ ಹೊಂದಿದ್ದರು. ಆದ್ರೆ ದೇಶದಲ್ಲಿ ಲಾಕ್ಡೌನ್ ಹೇರಿರೋದ್ರಿಂದ ರಾಷ್ಟ್ರಪತಿಗಳು ಯೋಧನ ತಂದೆ-ತಾಯಿ ಬೆಂಗಳೂರಿಗೆ ಬರಲು ವಿಮಾನದ ವ್ಯವಸ್ಥೆ ಮಾಡಲಿಲ್ಲ.
ಹೀಗಾಗಿ ಬೇರೆ ದಾರಿಯಿಲ್ಲದೇ ವೀರಯೋಧ ಎನ್.ಎಸ್ ಬಾಲ್ ಅವರ ತಂದೆ-ತಾಯಿ ರಸ್ತೆ ಮಾರ್ಗವಾಗಿಯೇ 2,600 ಕಿಲೋಮೀಟರ್ ಪ್ರಯಾಣ ಮಾಡಿ ಬೆಂಗಳೂರಿಗೆ ಬಂದಿದ್ದಾರೆ.
-masthmagaa.com
Contact Us for Advertisement