masthmagaa.com:
ಆಗಸ್ಟ್ 5, 2019ರಂದು ತೆಗೆದುಕೊಂಡ ನಿರ್ಧಾರವನ್ನು ವಾಪಸ್ ಪಡೆಯೋದಾದ್ರೆ ಭಾರತದ ಜೊತೆಗಿನ ಎಲ್ಲಾ ರೀತಿಯ ವಿಷಯಗಳನ್ನು ಬಗೆಹರಿಸಿಕೊಳ್ಳಲು ಸಿದ್ಧ ಅಂತ ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮೊಹ್ಮದ್ ಖುರೇಷಿ ಹೇಳಿದ್ದಾರೆ. ಭಾರತ ಈ ದಿನದಂದು ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿ, ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಘೋಷಿಸಿತ್ತು. ಈ ನಿರ್ಧಾರ ವಾಪಸ್ ಪಡ್ಕೊಂಡು, ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ರೆ, ಪಾಕಿಸ್ತಾನ ಖುಷಿಯಾಗಿ ಬಂದು ಕುಳಿತುಕೊಂಡು, ಎಲ್ಲಾ ವಿವಾದಗಳನ್ನು ಬಗೆಹರಿಸುವ ಕುರಿತು ಮಾತನಾಡುತ್ತಂತೆ.. ಅಂತ ಪರಿಸ್ಥಿತಿ ಭಾರತಕ್ಕೆ ಸದ್ಯಕ್ಕೆ ಬಂದಿಲ್ಲ.. ಬರೋದೂ ಇಲ್ಲ ಅಂತ ಅನ್ಸುತ್ತೆ.
-masthmagaa.com
Contact Us for Advertisement