ಸಿಡಿಲು ಬಡಿದು 64 ಮಂದಿ ಸಾವು! ಘೋರ ದುರಂತ!

masthmagaa.com:

ದೇಶದ ಹಲವು ಭಾಗಗಳಲ್ಲಿ ಭರ್ಜರಿ ಮಳೆಯಾಗ್ತಿದ್ದು, ಉತ್ತರ ಪ್ರದೇಶ ಮತ್ತು ರಾಜಸ್ಥಾನದಲ್ಲಿ ಸಿಡಿಲಿಗೆ 64 ಮಂದಿ ಬಲಿಯಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಉತ್ತರ ಪ್ರದೇಶ ಸರ್ಕಾರ, ರಾಜ್ಯದ 16 ಜಿಲ್ಲೆಗಳಲ್ಲಿ ಸಿಡಿಲಿಗೆ ಒಟ್ಟು 41 ಮಂದಿ ಪ್ರಾಣ ಬಿಟ್ಟಿದ್ದು, 30 ಮಂದಿ ಗಾಯಗೊಂಡಿದ್ದಾರೆ. ಬರೀ ಮನುಷ್ಯರು ಮಾತ್ರವಲ್ಲ. ಸಿಡಿಲಿಗೆ 250 ಪ್ರಾಣಿಗಳು ಕೂಡ ಪ್ರಾಣ ಬಿಟ್ಟಿವೆ ಅಂತ ಹೇಳಿದೆ. ಇನ್ನು ರಾಜಸ್ಥಾನದಲ್ಲಿ 23 ಮಂದಿ ಜೀವ ಬಿಟ್ಟಿದ್ದು, 25 ಮಂದಿ ಗಾಯಗೊಂಡಿದ್ಧಾರೆ. ಇವರಲ್ಲಿ 11 ಮಂದಿ ಜೈಪುರದಲ್ಲಿರೋ ಐತಿಹಾಸಿಕ ಅಮೆರ್ ಕೋಟೆಯ ಟವರ್​ನಲ್ಲಿ ನಿಂತ್ಕೊಂಡು ಸೆಲ್ಪಿ ತೆಕ್ಕೊಳ್ತಿದ್ರು ಅಂತ ಗೊತ್ತಾಗಿದೆ. ಪ್ರಧಾನಿ ಮೋದಿ ಕೂಡ ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದು, ಪಿಎಂ ರಿಲೀಫ್ ಫಂಡ್​ನಿಂದ ಹಣಕಾಸಿನ ನೆರವು ನೀಡೋದಾಗಿ ಹೇಳಿದ್ದಾರೆ. ಮತ್ತೊಂದ್ಕಡೆ ರಾಜ್ಯ ಸರ್ಕಾರಗಳು ಕೂಡ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿವೆ.

-masthmagaa.com

Contact Us for Advertisement

Leave a Reply