masthmagaa.com:

ಬಿಜೆಪಿ ಭೀಷ್ಮ ಅಂತಾನೇ ಕರೆಯಲ್ಪಡುವ ಹಿರಿಯ ನಾಯಕ ಎಲ್​.ಕೆ. ಅಡ್ವಾಣಿ ಇವತ್ತು 93ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಹಿನ್ನೆಲೆ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ದೆಹಲಿಯಲ್ಲಿರುವ ಅಡ್ವಾಣಿ ನಿವಾಸಕ್ಕೆ ಭೇಟಿ ನೀಡಿ ಶುಭ ಕೋರಿದ್ರು. ಅಡ್ವಾಣಿಗೆ ಹೂಗುಚ್ಚ ನೀಡಿ ಶುಭಕೋರಿದ ಪ್ರಧಾನಿ ಮೋದಿ ಅವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು. ನಂತರ ಅಡ್ವಾಣಿಯವರ ಕೈ ಹಿಡಿದು ಕೇಕ್ ಕಟ್ ಮಾಡಿಸಿದ್ರು.

ಅಂದ್ಹಾಗೆ ಎಲ್​.ಕೆ. ಅಡ್ವಾಣಿ ನವೆಂಬರ್ 8, 1927ರಲ್ಲಿ ಅಂದಿನ ಅವಿಭಜಿತ ಭಾರತದ ಕರಾಚಿಯಲ್ಲಿ ಜನಿಸಿದ್ರು. ಭಾರತ ಮತ್ತು ಪಾಕಿಸ್ತಾನ ಬೇರ್ಪಟ್ಟಾಗ ಅಡ್ವಾಣಿಯವರ ಕುಟುಂಬ ಭಾರತಕ್ಕೆ ಬಂದು ನೆಲೆಸಿತು. ಭಾರತೀಯ ಜನತಾ ಪಾರ್ಟಿಯ (BJP) ಸಂಸ್ಥಾಪಕರಲ್ಲಿ ಅಡ್ವಾಣಿ ಕೂಡ ಒಬ್ಬರು. ದೀರ್ಘಾವಧಿವರೆಗೆ ಬಿಜೆಪಿ ಅಧ್ಯಕ್ಷರಾಗಿದ್ದ ಕೀರ್ತಿ ಕೂಡ ಅಡ್ವಾಣಿ ಹೆಸರಲ್ಲಿದೆ.

-masthmagaa.com

Contact Us for Advertisement

Leave a Reply