ಮಹಾರಾಷ್ಟ್ರ: ಪಂಜಾಬ್ ಮತ್ತು ಮಹಾರಾಷ್ಟ್ರ ಬ್ಯಾಂಕ್ ಅಂದ್ರೆ ಪಿಎಂಸಿ ಬ್ಯಾಂಕ್ ಹಗರಣದಲ್ಲಿ ಮೊದಲ ಜೀವ ಬಲಿಯಾಗಿದೆ. ಈ ಬ್ಯಾಂಕ್ನಲ್ಲಿ ಖಾತೆ ಹೊಂದಿದ್ದ ಸಂಜಯ್ ಗುಲಾಟಿ ಎಂಬುವವರು ಸಾವನ್ನಪ್ಪಿದ್ದಾರೆ. ಅವರು ಸೋಮವಾರ ಪಿಎಂಸಿ ಬ್ಯಾಂಕ್ ವಿರುದ್ಧ ನಡೆದಿದ್ದ ಪ್ರತಿಭಟನೆಯಲ್ಲಿ ಭಾಗಿಯಾಗಿ ಮನೆಗೆ ಮರಳಿದ್ದರು. ಆದ್ರೆ ಮನೆಗೆ ಬರುತ್ತಿದ್ದಂತೆ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ.
ಸಂಜಯ್ ಗುಲಾಟಿ ಮೊದಲು ಜೆಟ್ ಏರ್ ವೇಸ್ನಲ್ಲಿ ಇಂಜಿನಿಯರ್ ಆಗಿದ್ದರು. ಆದ್ರೆ ಇತ್ತೀಚೆಗೆ ಜೆಟ್ ಏರ್ವೇಸ್ ಬಂದ್ ಆಗಿದ್ದರಿಂದ ಸಾವಿರಾರು ಮಂದಿ ಕೆಲಸ ಕಳೆದುಕೊಂಡಿದ್ದರು. ಇವರಲ್ಲಿ ಸಂಜಯ್ ಗುಲಾಟಿ ಕೂಡ ಒಬ್ಬರಾಗಿದ್ದರು. ಕುಟುಂಬದವರು ಮಾಹಿತಿ ನೀಡಿರುವ ಪ್ರಕಾರ ಸಂಜಯ್ ಗುಲಾಟಿ ಪಿಎಂಸಿ ಬ್ಯಾಂಕ್ನಲ್ಲಿ 4 ಖಾತೆ ಹೊಂದಿದ್ದರು. ಅವುಗಳಲ್ಲಿ ಒಟ್ಟು 90 ಲಕ್ಷ ರೂಪಾಯಿ ಕೂಡಿಟ್ಟಿದ್ದರು. ಅವರ ಪುತ್ರ ದಿವ್ಯಾಂಗನಾಗಿದ್ದು, ಆಗಾಗ ದುಡ್ಡಿನ ಅವಶ್ಯಕತೆ ಇರುತ್ತೆ. ಆದ್ರೆ ಇತ್ತೀಚೆಗೆ ಅವರು ಬ್ಯಾಂಕ್ನಿಂದ ಹಣ ತೆಗೆಯಲು ಸಾಧ್ಯವಾಗದೇ ತುಂಬಾ ಬೇಸರಗೊಂಡಿದ್ದರು.
Contact Us for Advertisement