masthmagaa.com:
ಹೋಂ ಕ್ವಾರಂಟೈನ್ನಲ್ಲಿದ್ದ 35 ವರ್ಷದ ವ್ಯಕ್ತಿಯೊಬ್ಬ ಬೆತ್ತಲೆಯಾಗಿ ಮನೆಯಿಂದ ಹೊರಗೆ ಬಂದು 80 ವರ್ಷದ ವೃದ್ಧೆಯನ್ನ ಕಚ್ಚಿ ಸಾಯಿಸಿದ ವಿಚಿತ್ರ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ಆರೋಪಿ ಮಣಿಕಂದನ್ ಇತ್ತೀಚೆಗಷ್ಟೇ ಶ್ರೀಲಂಕಾದಿಂದ ಹುಟ್ಟೂರಿಗೆ ಮರಳಿದ್ದ. ಹೀಗಾಗಿ ಆತನನ್ನ ಹೋಂ ಕ್ವಾರಂಟೈನ್ನಲ್ಲಿ ಇರಿಸಲಾಗಿತ್ತು. ಅದನ್ನ ಉಲ್ಲಂಘಿಸಿ ಬೆತ್ತಲೆಯಾಗಿ ಹೊರಗೆ ಓಡಿ ಬಂದ ಆತ, ವೃದ್ಧೆಯ ಕುತ್ತಿಗೆ ಭಾಗಕ್ಕೆ ಕಚ್ಚಿದ್ದಾನೆ. ತಕ್ಷಣ ವೃದ್ಧೆಯನ್ನ ಆಸ್ಪತ್ರೆಗೆ ದಾಖಲಿಸಿದ್ರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಅಂತ ಪೊಲೀಸರು ತಿಳಿಸಿದ್ದಾರೆ.
2010ರಲ್ಲಿ ಆರೋಪಿ ಮಣಿಕಂದನ್ ಮದುರೈನ ಆಸ್ಪತ್ರೆಯಲ್ಲಿ ಮಾನಸಿಕ ಅಸ್ವಸ್ತತೆಗೆ ಚಿಕಿತ್ಸೆ ಪಡೆದಿದ್ದ. ಈತನ ಕುಟುಂಬಸ್ಥರು ಹೇಳುವ ಪ್ರಕಾರ ಬ್ಯುಸಿನೆಸ್ನಲ್ಲಿ ಸಾಕಷ್ಟು ನಷ್ಟ ಅನುಭವಿಸಿದ್ದ ಈತ ಖಿನ್ನತೆಗೆ ಒಳಗಾಗಿದ್ದ ಎನ್ನಲಾಗಿದೆ.
-masthmagaa.com
Contact Us for Advertisement