ಇಂದು ಮತ್ತೆ ನಾಳೆ ರಾಜ್ಯದಲ್ಲಿ ಮಳೆಯಬ್ಬರ ಜೋರು..ಹುಷಾರು…

ಬೆಂಗಳೂರು: ಇವತ್ತು ಮತ್ತು ನಾಳೆ ರಾಜ್ಯದಾದ್ಯಂತ ಗುಡುಗು ಸಿಡಿಲು ಸಹಿತ ಭಾರಿ ಮಳೆಯಾಗೋ ಸಾಧ್ಯತೆಯಿದೆ ಅಂತ ಹವಾಮಾನ ಇಲಾಖೆ ಎಚ್ಚರಿಸಿದೆ. ಹೀಗಾಗಿ ಮುಂದಿನ 48 ಗಂಟೆಗಳವರೆಗೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಯೆಲ್ಲೊ ಅಲರ್ಟ್‌ ಘೋಷಿಸಲಾಗಿದೆ. ರಾಜ್ಯದಲ್ಲಿ ನಿನ್ನೆಯೇ ಮಳೆಯಬ್ಬರ ಶುರುವಾಗಿದ್ದು, ಕರಾವಳಿ ಭಾಗದಲ್ಲಿ ಭಾರಿ ಗಾಳಿ ಬೀಸುತ್ತಿದೆ. ಹೀಗಾಗಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಇಂದು ಕರ್ನಾಟಕದ ಉತ್ತರ ಒಳನಾಡಿನಲ್ಲಿ ಅಬ್ಬರಿಸಲಿರುವ ವರುಣ, ಅ.22ರಂದು ಉಳಿದ ಭಾಗಗಳಲ್ಲಿ ಪ್ರತಾಪ ತೋರಲಿದ್ದಾನೆ.

Contact Us for Advertisement

Leave a Reply