masthmagaa.com:
ದೆಹಲಿ: ಕಾಂಗ್ರೆಸ್ಗೆ ರಾಜೀನಾಮೆ ನೀಡಿರುವ ಜ್ಯೋತಿರಾದಿತ್ಯ ಸಿಂಧಿಯಾ ಈಗ ಬಿಜೆಪಿ ಸೇರಿದ್ದಾರೆ. 18 ವರ್ಷಗಳ ಕಾಂಗ್ರೆಸ್ ಪ್ರಯಾಣ ಅಂತ್ಯಗೊಳಿಸಿ, ಬಿಜೆಪಿ ಜೊತೆ ಹೊಸ ಯಾತ್ರೆ ಶುರು ಮಾಡಿದ್ದಾರೆ. ಬಿಜೆಪಿಗೆ ಬರುತ್ತಲೇ ಪ್ರಧಾನಿ ಮೋದಿಯವರನ್ನು ಹಾಡಿ ಹೊಗಳಿದ್ದಾರೆ.
ಬಿಜೆಪಿ ಸೇರ್ಪಡೆ ಬಳಿಕ ಮಾತನಾಡಿದ ಅವರು, ಪ್ರಧಾನಿ ಮೋದಿಯವರ ಕೈಯಲ್ಲಿ ದೇಶದ ಭವಿಷ್ಯ ಸುರಕ್ಷಿತವಾಗಿದೆ ಅಂದ್ರು. ದೇಶಸೇವೆಗೆ ಇಂಥಹ ವೇದಿಕೆ ಸಿಕ್ಕಿರೋದು ನನ್ನ ಅದೃಷ್ಟ. ಪ್ರಧಾನಿ ಮೋದಿಯವರಂತೆ ಯಾವುದೇ ಪಕ್ಷ ಗೆಲುವು ಸಾಧಿಸಿರಲಿಲ್ಲ.. ಅದೂ ಕೂಡ ಎರಡೆರಡು ಬಾರಿ..ಪ್ರಧಾನಿ ಮೋದಿಯವರು ಕೆಲಸ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಸಿಕ್ಕಿರೋ ಜನಬೆಂಬಲವನ್ನು ಒಳ್ಳೆಯ ರೀತಿಯಲ್ಲಿ ಬಳಸಿಕೊಳ್ತಿದ್ದಾರೆ. ಎಲ್ಲಕ್ಕಿಂತ ಮಿಗಿಲಾಗಿ ಪ್ರಧಾನಿ ಮೋದಿಯವರು ಭಾರತಕ್ಕೆ ವಿಶ್ವಮಟ್ಟದಲ್ಲಿ ಗೌರವ ತಂದುಕೊಟ್ಟರು. ಹೀಗಾಗಿ ಪ್ರಧಾನಿ ಮೋದಿಯವರ ಕೈಯಲ್ಲಿ ದೇಶದ ಭವಿಷ್ಯ ಸುರಕ್ಷಿತವಾಗಿದೆ ಅಂತ ನನಗೆ ಅನ್ನಿಸುತ್ತಿದೆ ಅಂತ ಹೇಳಿದ್ದಾರೆ.
ಅಲ್ಲದೆ ನನ್ನ ಹಿಂದಿನ ಪಕ್ಷದಲ್ಲಿ ನಾನು ದೇಶದ ಜನತೆಯ ಸೇವೆ ಮಾಡಲು ಅವಕಾಶ ಸಿಗಲಿಲ್ಲ ಅನ್ನೋ ನೋವಿದೆ ಎಂದಿದ್ದಾರೆ. ಇನ್ನೊಂದು ವಿಚಾರ ಅಂದ್ರೆ ಕೆಲವೇ ದಿನಗಳ ಹಿಂದೆ ದೆಹಲಿಯಲ್ಲಿ ಹಿಂಸಾಚಾರ ನಡೆದಾಗ ಇದೇ ಜ್ಯೋತಿರಾದಿತ್ಯ ಸಿಂಧಿಯಾ ಬಿಜೆಪಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದರು.
-masthmagaa.com
Contact Us for Advertisement