ಜೀವ ಬೆದರಿಕೆಯಿಂದ ಬಂದೂಕು ಇಟ್ಕೊಳ್ತಿನಿ ಅಂದ ರಿಯಾಜ್ ಅಹ್ಮದ್!

masthmagaa.com:

ಕಾಂಗ್ರೆಸ್‌ ಪ್ರಚಾರದ ವೇಳೆ ಬಂದೂಕು ಇಟ್ಕೊಂಡ್‌ ಬಂದು ರಿಯಾಜ್‌ ಅಹ್ಮದ್ ಅನ್ನೊರು ಸಿಎಂ ಸಿದ್ದರಾಮಯ್ಯ ಅವ್ರಿಗೆ ಹಾರ ಹಾಕಿದ ವಿಚಾರ ಭಾರಿ ಚರ್ಚೆಗೆ ಕಾರಣವಾಗಿತ್ತು. ಈ ವಿಚಾರವಾಗಿ ರಿಯಾಜ್‌ರನ್ನ ಸಿದ್ದಾಪುರ ಪೋಲಿಸರು ವಿಚಾರಣೆಗೆ ಒಳಪಡಿಸಿಗಿದ್ದು, ನನಗೆ ಲೈಫ್‌ ಥ್ರೆಟ್‌ ಇರೋದ್ರಿಂದ ಪ್ರತಿ ದಿನ ಬಂದೂಕು ಇಟ್ಕೊಂಡೇ ಹೊರಗೆ ಬರ್ತೀನಿ ಅಂತ ರಿಯಾಜ್‌ ಹೇಳಿದ್ದಾರೆ. ಅಲ್ದೇ ವೆಹಿಕಲ್‌ ಮೇಲೆ ಏರಿದಾಗ ಬಂದೂಕು ಕಾಣಿಸಿದೆ. ನಾನೇನು ಬಂದೂಕು ಪ್ರದರ್ಶನ ಮಾಡಿಲ್ಲ ಅಂತ ರಿಯಾಜ್‌ ಪೋಲಿಸರಿಗೆ ತಿಳಿಸಿದ್ದಾರೆ. ಇನ್ನು ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರೊ ಡಿಸಿಎಂ ಡಿಕೆ‌ ಶಿವಕುಮಾರ್, ಈ ವೇಳೆ ಭದ್ರತಾ ವೈಫಲ್ಯ ಆಗಿಲ್ಲ. ಅವ್ರವರ ರಕ್ಷಣೆಗೆ ಬಂದೂಕು ಇಟ್ಕೊಂಡಿರ್ತಾರೆ ಅಂತ ಸಮರ್ಥನೆ ನೀಡಿದ್ದಾರೆ.

-masthmagaa.com

Contact Us for Advertisement

Leave a Reply