ಕೊರೋನಾ ವೈರಸ್ ಬಗ್ಗೆ ಭಾರತದಲ್ಲಿ ಕಟ್ಟೆಚ್ಚರ..!

ಚೀನಾ ಮೂಲಕ ವಿಶ್ವದ ಹಲವು ರಾಷ್ಟ್ರಗಳಿಗೆ ಹರಡಿರೋ ಕೊರೋನಾ ವೈರಸ್ ಬಗ್ಗೆ ಭಾರತ ಭಾರಿ ಕಟ್ಟೆಚ್ಚರ ವಹಿಸಿದೆ. ಇದೀಗ ಕೇರಳದಲ್ಲಿ 2ನೇ ಪ್ರಕರಣ ಬೆಳಕಿಗೆ ಬಂದಿದೆ. ಇತ್ತೀಚೆಗಷ್ಟೇ ಚೀನಾದಿಂದ ಬಂದಿದ್ದ ವ್ಯಕ್ತಿಯೊಬ್ಬರಲ್ಲಿ ಕೊರೋನಾ ವೈರಸ್ ಕಾಣಿಸಿಕೊಂಡಿದೆ. ಸದ್ಯ ರೋಗಿಯ ಸ್ಥಿತಿ ಸ್ಥಿರವಾಗಿದ್ದು, ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಜನವರಿ 30ರಂದು ಕರೋನಾವೈರಸ್​​ನ ಮೊದಲ ಪ್ರಕರಣ ಬೆಳಕಿಗೆ ಬಂದಿತ್ತು.

ಇನ್ನು ಕರೋನಾ ವೈರಸ್ ಬೆದರಿಕೆಯಿಂದಾಗಿ, ಚೀನಾದಿಂದ ಭಾರತೀಯ ವಿದ್ಯಾರ್ಥಿಗಳು ಮತ್ತು ವೃತ್ತಿಪರರನ್ನು ಮರಳಿ ಕರೆತರುವ ಪ್ರಕ್ರಿಯೆ ಮುಂದುವರೆದಿದೆ. ಇಂದು ಏರ್ ಇಂಡಿಯಾದ ಎರಡನೇ ವಿಮಾನವು 323 ಭಾರತೀಯರನ್ನು ಹೊತ್ತು ಭಾರತಕ್ಕೆ ಮರಳಿದೆ. ಇದಕ್ಕೂ ಮುನ್ನ ಶನಿವಾರ ಬೆಳಿಗ್ಗೆ 324 ಭಾರತೀಯರನ್ನು ಚೀನಾದ ವುಹಾನ್ ಪ್ರಾಂತ್ಯದಿಂದ ದೆಹಲಿಗೆ ಕರೆತರಲಾಯ್ತು.

Contact Us for Advertisement

Leave a Reply