ಶಿವಸೇನೆ ಕಚೇರಿಯಲ್ಲಿ ನೂತನ ಶಾಸಕರ ಸಭೆ ನಡೆಸಲಾಯ್ತು. ಈ ಸಭೆಯಲ್ಲಿ ಪುನಃ ಬಿಜೆಪಿ ಜೊತೆಗಿನ 50-50 ಫಾರ್ಮುಲಾ ಬಗ್ಗೆ ಚರ್ಚಿಸಲಾಯ್ತು. ಅಲ್ಲದೆ ಈಗ ಬಿಜೆಪಿ ಸಿಎಂ ಹುದ್ದೆ ಕುರಿತು ಲಿಖಿತ ಭರವಸೆ ನೀಡಬೇಕು ಎಂದು ಪಟ್ಟು ಹಿಡಿದಿದೆ.
ಶಿವಸೇನೆಯಿಂದ ಸಿಲ್ಲೋಡ್ ಕ್ಷೇತ್ರದಲ್ಲಿ ಗೆದ್ದಿರುವ ಮುಸ್ಲಿಂ ಶಾಸಕ ಅಬ್ದುಲ್ ಸತಾರ್ ಮಾತನಾಡಿ, ನಾವು ಆದಿತ್ಯ ಠಾಕ್ರೆಯನ್ನು ಸಿಎಂ ಸ್ಥಾನದಲ್ಲಿ ನೋಡಲು ಬಯಸುತ್ತೇವೆ. ಈ ಹಿಂದೆ ಬಿಜೆಪಿ ಜೊತೆ ಮೈತ್ರಿ ವೇಳೆಯೇ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಮೊದಲ ಎರಡೂವರೆ ವರ್ಷ ಶಿವಸೇನೆಯವರು ಮತ್ತು ನಂತರದ ಎರಡೂವರೆ ವರ್ಷ ಬಿಜೆಪಿಯವರು ಸಿಎಂ ಆಗೋದು ಎಂದು ನಿರ್ಧರಿಸಲಾಗಿತ್ತು ಅಂತ ಹೇಳಿದ್ದಾರೆ.
Contact Us for Advertisement