ಮಹಾರಾಷ್ಟ್ರ ಶಿವಸೇನೆ ಕಿರಿಕ್​..! ಬಿಜೆಪಿಗೆ ಹೊಸ ಟೆನ್ಶನ್​​..!

ಶಿವಸೇನೆ ಕಚೇರಿಯಲ್ಲಿ ನೂತನ ಶಾಸಕರ ಸಭೆ ನಡೆಸಲಾಯ್ತು. ಈ ಸಭೆಯಲ್ಲಿ ಪುನಃ ಬಿಜೆಪಿ ಜೊತೆಗಿನ 50-50 ಫಾರ್ಮುಲಾ ಬಗ್ಗೆ ಚರ್ಚಿಸಲಾಯ್ತು. ಅಲ್ಲದೆ ಈಗ ಬಿಜೆಪಿ ಸಿಎಂ ಹುದ್ದೆ ಕುರಿತು ಲಿಖಿತ ಭರವಸೆ ನೀಡಬೇಕು ಎಂದು ಪಟ್ಟು ಹಿಡಿದಿದೆ.

ಶಿವಸೇನೆಯಿಂದ ಸಿಲ್ಲೋಡ್ ಕ್ಷೇತ್ರದಲ್ಲಿ ಗೆದ್ದಿರುವ ಮುಸ್ಲಿಂ ಶಾಸಕ ಅಬ್ದುಲ್ ಸತಾರ್​​ ಮಾತನಾಡಿ, ನಾವು ಆದಿತ್ಯ ಠಾಕ್ರೆಯನ್ನು ಸಿಎಂ ಸ್ಥಾನದಲ್ಲಿ ನೋಡಲು ಬಯಸುತ್ತೇವೆ. ಈ ಹಿಂದೆ ಬಿಜೆಪಿ ಜೊತೆ ಮೈತ್ರಿ ವೇಳೆಯೇ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಮೊದಲ ಎರಡೂವರೆ ವರ್ಷ ಶಿವಸೇನೆಯವರು ಮತ್ತು ನಂತರದ ಎರಡೂವರೆ ವರ್ಷ ಬಿಜೆಪಿಯವರು ಸಿಎಂ ಆಗೋದು ಎಂದು ನಿರ್ಧರಿಸಲಾಗಿತ್ತು ಅಂತ ಹೇಳಿದ್ದಾರೆ.

 

Contact Us for Advertisement

Leave a Reply