ಭಾರತರತ್ನ ರಾಜಕೀಯ..! ಭಗತ್ ಸಿಂಗ್​, ಸುಖ್​ದೇವ್, ರಾಜ್​ಗುರುಗೆ ಕೊಡಿ…

ಕೇಂದ್ರ ಸರ್ಕಾರ ವಿ.ಡಿ ಸಾವರ್ಕರ್​​​ಗೆ ಭಾರತ ರತ್ನ ನೀಡುವ ಬದಲು ಭಗತ್ ಸಿಂಗ್​, ರಾಜ್​ಗುರು, ಸುಖದೇವ್ ಅವರಿಗೆ ಭಾರತ ರತ್ನ ನೀಡಲಿ ಎಂದು ಕಾಂಗ್ರೆಸ್ ನಾಯಕ ಮನೀಶ್ ತಿವಾರಿ ಒತ್ತಾಯಿಸಿದ್ದಾರೆ. ಈ ಬಗ್ಗೆ ಪ್ರಧಾನಿ ಮೋದಿಗೆ ಪತ್ರ ಬರೆದಿರುವ ಅವರು, ಈ ಮೂವರು ಸ್ವಾತಂತ್ರ್ಯ ಹೋರಾಟಗಾರರಿಗೆ ಭಾರತ ರತ್ನ ನೀಡಬೇಕು. ಜೊತೆಗೆ ಮೊಹಾಲಿಯಲ್ಲಿರೋ ವಾಯುನೆಲೆಗೆ  ಶಹೀದ್ ಎ ಆಜಾಮ್ ಸಿಂಹ ಎಂದು ಮರುನಾಮಕರಣ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಹುತಾತ್ಮರಾದ ಭಗತ್ ಸಿಂಗ್​, ಸುಖದೇವ್, ರಾಜ್​​ಗುರು ಬ್ರಿಟಿಷರ ವಿರುದ್ಧ ಹೋರಾಡಿದ್ರು. ಅವರಿಂದಾಗಿ ಒಂದು ಪೀಳಿಗೆಯೇ ಪ್ರೇರಣೆ ಪಡೆದಿದೆ. ಅಲ್ಲದೆ ಅವರು 1931ರ ಮಾರ್ಚ್​ 23ರಂದು ತಮ್ಮ ಪ್ರಾಣವನ್ನು ಅರ್ಪಿಸಿದ್ರು ಅಂತ ಹೇಳಿದ್ದಾರೆ.

Contact Us for Advertisement

Leave a Reply