ಫಲಿಸಲಿಲ್ಲ ಪ್ರಾರ್ಥನೆ.. ಬದುಕಲಿಲ್ಲ ಕಂದಮ್ಮ..

ದೇಶದೆಲ್ಲೆಡೆ ದೀಪಾವಳಿ ಸಂಭ್ರಮ ಇದ್ರೆ ತಮಿಳುನಾಡಿನಲ್ಲಿ ಸೂತಕ ಆವರಿಸಿದೆ. 3 ದಿನಗಳಿಂದ ಕಂದಮ್ಮಗಾಗಿ ನಡೆಸಿದ ಕಾರ್ಯಚರಣೆ ವಿಫಲವಾಗಿದೆ. ಮಗು ಬದುಕಿ ಬರಲಿ ಎಂಬ ಸಾವಿರಾರು ಜನರ ಪ್ರಾರ್ಥನೆ ಆ ದೇವರಿಗೆ ಕೇಳಿಸೇ ಇಲ್ಲ. ಕರುಣೆ ಇಲ್ಲದ ಜವರಾಯ 2 ವರ್ಷದ ಮಗುವನ್ನು ತನ್ನತ್ತ ಕರೆದುಕೊಂಡಿದ್ದಾನೆ. ಮೂರು ದಿನಗಳ ಹಿಂದೆ ತಿರುಚಿತಪಲ್ಲಿಯ ನಡುಕಟ್ಟುಪಟ್ಟಿಯಲ್ಲಿ ಆಟವಾಡುತ್ತಿದ್ದ 2 ವರ್ಷದ ಸುಜಿತ್​ ವಿಲ್ಸನ್​ ಆಕಸ್ಮಿಕವಾಗಿ ಬೋರ್​​ವೆಲ್​ ಗುಂಡಿಗೆ ಬಿದ್ದಿದ್ದ. ಪರಿಣಾಮ, ಸುಮಾರು 25 ಅಡಿ ಆಳದಲ್ಲಿ ಜೀವನ್ಮರಣದ ಹೋರಾಟ ನಡೆಸಿದ್ದ. ವಿಷಯ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ, ಪರ್ಯಾಯವಾಗಿ ಸುರಂಗ ತೋಡಿ, ಸುಜಿತ್​ ರಕ್ಷಣೆಗೆ ಮುಂದಾಗಿದ್ರು. 3 ದಿನಗಳ ಕಾರ್ಯಾಚರಣೆ ನಡೆಸಿದ್ರೂ ಸುಜಿತ್​ ಉಳಿಸಿಕೊಳ್ಳಲಾಗಲಿಲ್ಲ. ಬೋರ್​ವೆಲ್​​​​ನಿಂದ ಕೊಳೆತ ವಾಸನೆ ಬಂದ ಹಿನ್ನೆಲೆ ಮಗು ಮೃತಪಟ್ಟಿರೋದಾಗಿ ಅಧಿಕಾರಿಗಳು ಘೋಷಣೆ ಮಾಡಿದ್ದಾರೆ. ಅಲ್ದೆ ಮಗುವಿನ ಮೃತ ದೇಹವನ್ನು ಹೊರತೆಗೆಯಲಾಗಿದ್ದು, ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.

Contact Us for Advertisement

Leave a Reply