masthmagaa.com:
ಉತ್ತರ ಪ್ರದೇಶದಲ್ಲಿ ಕೊರೋನಾ ಹೆಚ್ಚಾಗ್ತಿರೋದ್ರಿಂದ ಜನವರಿ 23ರವರೆಗೆ ರಾಜಕೀಯ ರ್ಯಾಲಿ ಸಭೆ ಸಮಾರಂಭಗಳನ್ನು ಚುನಾವಣಾ ಆಯೋಗ ನಿರ್ಬಂಧಿಸಿದೆ. ಕಳೆದ ವಾರ ರೂಲ್ಸ್ ಬ್ರೇಕ್ ಮಾಡಿದ್ದ ಸಮಾಜವಾದಿ ಪಕ್ಷಕ್ಕೆ ಆಯೋಗ ನೋಟಿಸ್ ಕೂಡ ನೀಡಿತ್ತು. ಇದನ್ನು ಪ್ರಶ್ನಿಸಿರೋ ಅಖಿಲೇಶ್ ಸಿಂಗ್ ಯಾದವ್, ಬಿಜೆಪಿಯ ಅಮ್ರೋಹಾ ಕ್ಷೇತ್ರದ ಶಾಸಕ ರೋಡ್ಶೋ ಮಾಡಿರೋ ವಿಡಿಯೋ ಶೇರ್ ಮಾಡಿದ್ದಾರೆ. ಜೊತೆಗೆ ಬಿಜೆಪಿ ಶಾಸಕರು ಮತ್ತು ಕೆಲವೇ ದಿನ ಸಿಎಂ ಹುದ್ದೆಯಲ್ಲಿರೋ ಯೋಗಿ ಆದಿತ್ಯನಾಥ್ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸ್ತಿದ್ದಾರೆ. ಚುನಾವಣಾ ಆಯೋಗ ನಮ್ಮಂತೆಯೇ ಅವರ ವಿರುದ್ಧವೂ ಕ್ರಮ ತಗೊಂಡು ಸಮಾನತೆ ಪ್ರದರ್ಶಿಸಬೇಕು ಅಂತ ಕರೆ ನೀಡಿದ್ದಾರೆ.
-masthmagaa.com
Contact Us for Advertisement