masthmagaa.com:

ಗಡಿಯಲ್ಲಿ ಚೀನಾ ತನ್ನ ಸೇನಾ ಜಮಾವಣೆಯನ್ನ ಕಮ್ಮಿ ಮಾಡೋವರೆಗೆ ಭಾರತ ಕೂಡ ಸೇನಾಪಡೆಗಳ ಸಂಖ್ಯೆಯನ್ನ ಕಮ್ಮಿ ಮಾಡೋ ಮಾತೇ ಇಲ್ಲ ಅಂತ ರಕ್ಷಣಾ ಸಚಿವ ರಾಜ್​ನಾಥ್ ಸಿಂಗ್ ಸಂದರ್ಶನ ಒಂದರಲ್ಲಿ ಹೇಳಿದ್ದಾರೆ. ಚೀನಾ ಜೊತೆ ಯಾವಾಗ ಮಾತುಕತೆ ಅಂತ ಕೇಳ್ದಾಗ, ‘ಈಗ ನಡೀತಿರೋ ಸಂಘರ್ಷ ಕುರಿತು ಮಾತುಕತೆಗೆ ಯಾವುದೇ ಡೆಡ್​ಲೈನ್​ ಇಲ್ಲ. ಅದಕ್ಕೊಂದು ಡೇಟ್ ಅಂತ​ ಫಿಕ್ಸ್ ಮಾಡಕ್ಕಾಗಲ್ಲ. ಆದ್ರೆ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಯುತ್ತೆ ಅನ್ನೋ ನಂಬಿಕೆ ನಮಗಿದೆ’ ಅಂತ ಹೇಳಿದ್ದಾರೆ. ಇನ್ನು ಅರುಣಾಚಲ ಪ್ರದೇಶದಲ್ಲಿ ಗ್ರಾಮವೊಂದನ್ನ ಚೀನಾ ನಿರ್ಮಿಸುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ರಾಜನಾಥ್ ಸಿಂಗ್, ‘ಹಲವು ವರ್ಷಗಳಿಂದ ಗಡಿ ಉದ್ದಕ್ಕೂ ಚೀನಾ ಅಂತಹ ಮೂಲಸೌಕರ್ಯಗಳನ್ನ ಅಭಿವೃದ್ಧಿಪಡಿಸುತ್ತಿದೆ. ಈಗ ಭಾರತ ಕೂಡ ವಾಸ್ತವ ನಿಯಂತ್ರಣ ರೇಖೆ (LAC) ಬಳಿ ಮೂಲಸೌಕರ್ಯಗಳನ್ನ ನಿರ್ಮಿಸುತ್ತಿದೆ. ಆ ಕೆಲಸ ತುಂಬಾ ಫಾಸ್ಟಾಗಿ ನಡೀತಿದೆ’ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply