masthmagaa.com:
ಮಹಾರಾಷ್ಟ್ರ: ಮಾಧ್ಯಮ ವಿಚಾರಣೆ ಅಂದ್ರೆ ಡಿಬೇಟ್ಗಳಲ್ಲಿ ಕೂತ್ಕೊಂಡು ಹಂಗೆ ಹಿಂಗೆ ಅಂತ ಅಂದಾಜಿನ ಮೇಲೆ ಗುಂಡು ಹೊಡೀತಾರಲ್ವಾ.. ಅದ್ರಿಂದ ನ್ಯಾಯಾಂಗದ ಕಾರ್ಯನಿರ್ವಹಣೆಗೆ ಅಡ್ಡಿಯಾಗುತ್ತೆ. ಹಸ್ತಕ್ಷೇಪ ಮಾಡಿದಂತಾಗುತ್ತೆ ಅಂತ ಬಾಂಬೆ ಹೈಕೋರ್ಟ್ ಹೇಳಿದೆ. ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಪ್ರಸಾರವಾದ ಸುದ್ದಿಗಳ ಬಗ್ಗೆ ಬಾಂಬೆ ಹೈಕೋರ್ಟ್ಗೆ ಅರ್ಜಿ ಸಲ್ಲಿಕೆಯಾಗಿತ್ತು.
ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯ, ಮಾಧ್ಯಮಗಳು ಆತ್ಮಹತ್ಯೆಯಂತಹ ಪ್ರಕರಣಗಳನ್ನು ವರದಿ ಮಾಡುವಾಗ ತಾಳ್ಮೆಯಿಂದ ವರ್ತಿಸಬೇಕು. ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಸಂಬಂಧ ಕೆಲ ಮಾಧ್ಯಮಗಳು ಮಾಡಿರೋ ವರದಿ ಅಪಮಾನಕರವಾಗಿವೆ ಅಂತ ಕೋರ್ಟ್ ಹೇಳಿದೆ. ವಿಚಾರಣಾ ಹಂತದಲ್ಲಿರೋ ಪ್ರಕರಣಗಳ ಕುರಿತ ಇಂತಹ ವರದಿ ನ್ಯಾಯಾಂಗದ ಕಾರ್ಯನಿರ್ವಹಣೆ ಮೇಲೆ ಪರಿಣಾಮ ಬೀರುತ್ತೆ. ಅಡ್ಡಿಪಡಿಸುತ್ತೆ ಎಂದಿದೆ.
-masthmagaa.com
Contact Us for Advertisement