ಭಾರತದ ಐವರು ನಾಗರಿಕರನ್ನು ಅಪಹರಿಸಿದ ಚೀನಾ ಸೇನೆ..!

masthmagaa.com:

ಅರುಣಾಚಲ ಪ್ರದೇಶ: ಲಡಾಕ್ ಗಡಿಯಲ್ಲಿ ಭಾರತ-ಚೀನಾ ನಡುವೆ ಸಂಘರ್ಷ ಮುಂದುವರಿದಿದೆ. ಈ ನಡುವೆ ಅರುಣಾಚಲ ಪ್ರದೇಶದಿಂದ ಐವರನ್ನು ಚೀನಾ ಸೇನೆ ಅಪಹರಿಸಿಕೊಂಡು ಹೋಗಿದೆ ಅನ್ನೋ ಸುದ್ದಿ ಆತಂಕ ಮೂಡಿಸಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ಶಾಸಕ ನಿನಾಂಗ್ ಎರಿಂಗ್, ಸುಬನ್​ಸಿರಿ ಜಿಲ್ಲೆಯ ಐವರು ನಾಗರಿಕರನ್ನು ಪೀಪಲ್ಸ್ ಲಿಬರೇಷನ್ ಆರ್ಮಿ ಅಪಹರಿಸಿದೆ. ಕೆಲ ತಿಂಗಳ ಹಿಂದೆಯೂ ಇಂಥದ್ದೇ ಘಟನೆ ನಡೆದಿತ್ತು. ಚೀನಾದ ಸೇನೆ ಈ ಬಗ್ಗೆ ಉತ್ತರಿಸಬೇಕು ಎಂದು ಆಗ್ರಹಿಸಿದ್ದಾರೆ. ಜೊತೆಗೆ ನಾಪತ್ತೆಯಾಗಿರುವ ಐವರ ಹೆಸರಿರುವ ಒಂದು ಸ್ಕ್ರೀನ್​ ಶಾಟ್ ಕೂಡ ಶೇರ್ ಮಾಡಿದ್ದಾರೆ. ಜೊತೆಗೆ ಚೀನಾ ಸೇನೆ ಲಡಾಕ್, ದೋಕ್ಲಾಂ ಜೊತೆಗೆ ಅರುಣಾಚಲ ಪ್ರದೇಶದಲ್ಲೂ ಗಡಿ ನುಸುಳುತ್ತಿದ್ದು, ಸರ್ಕಾರ ಕಾರ್ಯಾಚರಣೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

-masthmagaa.com

Contact Us for Advertisement

Leave a Reply