masthmagaa.com:
ಸಂಸದ ಅಸಾದುದ್ದೀನ್ ಓವೈಸಿ ಚೀನಾ ಜೊತೆಗಿನ ಸಂಘರ್ಷದ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಗಲ್ವಾನ್ ಕಣಿವೆಯಲ್ಲಿ ನಡೆದ ಘರ್ಷಣೆ ಬಳಿಕ ಕೇಂದ್ರ ಸರ್ಕಾರ ಚೀನಾದ ಬಳಿ ಸಾಲ ಪಡೆದಿದೆ ಅನ್ನೋ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಅಸಾದುದ್ದೀನ್ ಓವೈಸಿ, ಜೂನ್ 15ರಂದು ಚೀನೀ ಯೋಧರ ಜೊತೆಗಿನ ಸಂಘರ್ಷದ ವೇಳೆ 20 ಮಂದಿ ಭಾರತೀಯ ಯೋಧರು ಹುತಾತ್ಮರಾದ್ರು. ಇದಾದ 4 ದಿನಗಳ ಬಳಿಕ ಅಂದ್ರೆ ಜೂನ್ 19ರಂದು ಪ್ರಧಾನಮಂತ್ರಿಯವರು ಚೀನಾದಿಂದ 5,521 ಕೋಟಿ ರೂಪಾಯಿ ಸಾಲ ಪಡೆದು ತಕ್ಕ ತಿರುಗೇಟು ಕೊಟ್ಟರು. ಇದು ನಮ್ಮ ಯೋಧರ ಬಲಿದಾನಕ್ಕೆ ಮಾಡಿದ ಅಪಮಾನವಾಗಿದೆ ಅಂತ ವಾಗ್ದಾಳಿ ನಡೆಸಿದ್ದಾರೆ.
-masthmagaa.com
Contact Us for Advertisement