ಈದ್ಗಾ ಮೈದಾನ, ಮಸೀದಿಗಳಲ್ಲಿ ಪ್ರಾರ್ಥನೆಗೆ ಅವಕಾಶ ಕೊಡಿ: ಇಬ್ರಾಹಿಂ ಮನವಿ

masthmagaa.com:

ಈದ್ ಹಿನ್ನೆಲೆ ಮೇ 24 ಮತ್ತು 25ರಂದು ರಾಜ್ಯಾದ್ಯಂತ ಮುಸ್ಲಿಮರಿಗೆ ಈದ್ಗಾ ಮೈದಾನ ಅಥವಾ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಲು ಅನುವು ಮಾಡಿಕೊಡಬೇಕು ಅಂತ ಕಾಂಗ್ರೆಸ್ ಎಂಎಲ್​ಸಿ ಸಿ.ಎಂ. ಇಬ್ರಾಹಿಂ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.

ಕೊರೋನಾ ಹಾವಳಿ ಹಿನ್ನೆಲೆ ಸರ್ಕಾರದ ಆದೇಶದಂತೆ ಮುಸ್ಲಿಮರು ಮಸೀದಿಗಳ ಬದಲು ಮನೆಗಳಲ್ಲೇ ಪ್ರಾರ್ಥನೆ ಮಾಡುತ್ತಿದ್ದಾರೆ. ಆದ್ರೆ ಮೇ 24 ಮತ್ತು 25ರಂದು ಈದ್ ಉಲ್ ಫಿತರ್ ಇರುವುದರಿಂದ ವಿಶೇಷ ಪ್ರಾರ್ಥನೆ ಸಲ್ಲಿಸಬೇಕಿದೆ. ಹೀಗಾಗಿ ಸರ್ಕಾರ ವೈದ್ಯಕೀಯ ತಜ್ಞರ ಸಲಹೆ ಪಡೆದು ಈದ್ಗಾ ಮೈದಾನ ಅಥವಾ ಮಸೀದಿಗಳಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಪ್ರಾರ್ಥನೆ ಮಾಡಲು ಅವಕಾಶ ಕೊಡಬೇಕು ಅಂತ ಕೇಳಿದ್ದಾರೆ.

ಪ್ರಾರ್ಥನೆ ವೇಳೆ ಅಗತ್ಯ ಮುನ್ನೆಚ್ಚರಿಕಾ ಕ್ರಮ ಹಾಗೂ ಸುರಕ್ಷತಾ ಕ್ರಮಗಳನ್ನ ಕೈಗೊಳ್ಳುವುದಾಗಿಯೂ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ದೇಶದಲ್ಲಿ 3ನೇ ಹಂತದ ಲಾಕ್​ಡೌನ್ ಮೇ 17ರಂದು ಅಂತ್ಯವಾಗಲಿದೆ. ಆದ್ರೆ ಮೇ 18ರಿಂದ 4ನೇ ಹಂತದ ಲಾಕ್​ಡೌನ್ ಇರುವುದಾಗಿ ಪ್ರಧಾನಿ ಮೋದಿ ಇತ್ತೀಚೆಗಷ್ಟೇ ಹೇಳಿದ್ದರು. ಈ ಹಿನ್ನೆಲೆ ಸಿಎಂ ಇಬ್ರಾಹಿಂ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply