ಮತಾಂತರ ನಿಷೇಧ ಕಾಯ್ದೆ ಬಗ್ಗೆ ನಾಯಕರು ಹೇಳಿದ್ದೇನು?

masthmagaa.com:
ಮೊದಲ ದಿನದ ಕಲಾಪದಲ್ಲಿ ಮತಾಂತರ ನಿಷೇಧದ ಬಗ್ಗೆ ಚರ್ಚೆಯಾಗದಿದ್ದರೂ ಕಲಾಪದ ಹೊರಗೆ ಕಾಂಗ್ರೆಸ್​ – ಬಿಜೆಪಿ ನಾಯಕರು ಪರಸ್ಪರ ವಾಗ್ದಾಳಿ ನಡೆಸಿದ್ದಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಯಾವುದೇ ಧರ್ಮವನ್ನ ಅನುಸರಿಸೋಕೆ ನಮ್ಮ ಸಂವಿಧಾನನೇ ಅವಕಾಶ ಕೊಟ್ಟಿದೆ. ಅಲ್ಲದೆ ಬಲವಂತದ ಮತಾಂತರ ಮಾಡ್ಬಾರ್ದು ಅನ್ನೋ ಕಾಯ್ದೆ ಈಗಾಗಲೇ ಜಾರಿ ಇದೆ. ಬಲವಂತದ ಮತಾಂತರ ಮಾಡಿದ್ರೆ ಕ್ರಮ ಕೈಗೊಳ್ಳಲಿ. ಅದುಬಿಟ್ಟು ಮತಾಂತರ ನಿಷೇಧ ಕಾನೂನು ಜಾರಿಗೆ ತರುವ ಅವಶ್ಯಕತೆ ಏನಿದೆ. ಇದು ಯಾವುದೋ ಒಂದು ಧರ್ಮ, ಜಾತಿಯವರನ್ನ ಟಾರ್ಗೆಟ್​ ಮಾಡಿದಂತಿದೆ ಅಂತ ಹೇಳಿದ್ರು.
-masthmagaa.com

Contact Us for Advertisement

Leave a Reply