masthmagaa.com:
ದೆಹಲಿ: ಇತ್ತೀಚೆಗಷ್ಟೇ ಅಮೆರಿಕ ಕೇಂದ್ರ ಸರ್ಕಾರದ ಕೃಷಿ ಕಾನೂನಿಗೆ ಬೆಂಬಲಿಸೋ ಜೊತೆಗೆ ರೈತರ ಶಾಂತಿಯುತ ಪ್ರತಿಭಟನೆಗೂ ಜೈ ಅಂದಿತ್ತು. ಆದ್ರೀಗ ಭಾರತಕ್ಕೆ ಸಂಬಂಧಿಸಿದ ಅಮೆರಿಕ ಸಂಸತ್ನ ಸಂಸದೀಯ ಸಮಿತಿ ರೈತರ ಪ್ರತಿಭಟನೆಗೆ ಬಗ್ಗೆ ಪ್ರತಿಕ್ರಿಯಿಸಿದೆ. ಭಾರತ ಸರ್ಕಾರ ರೈತರು ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ಅವಕಾಶ ನೀಡಬೇಕು. ಈ ಮೂಲಕ ಪ್ರಜಾಪ್ರಭುತ್ವದ ತತ್ವಗಳನ್ನು ಕಾಪಾಡಬೇಕು ಅಂತ ಹೇಳಿದೆ. ಅಲ್ಲದೆ ಪ್ರತಿಭಟನೆ ನಡೆಯುತ್ತಿರುವ ಸ್ಥಳಗಳಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಬಾರದು.. ರೈತರು ಮತ್ತು ಪತ್ರಕರ್ತರಿಗೆ ಇಂಟರ್ನೆಟ್ ಸೇವೆ ಒದಗಿಸಬೇಕು ಅಂತ ಹೇಳಿದೆ.
ಆದ್ರೆ ಇಲ್ಲಿ ಒಂದು ಅಂಶವನ್ನು ಗಮನಿಸಬೇಕು.. ದೆಹಲಿ ಗಡಿಯಲ್ಲಿ 2 ತಿಂಗಳುಗಳಿಂದ ಪ್ರತಿಭಟನೆ ನಡೆಯುತ್ತಿದ್ರೂ ಇಂಟರ್ನೆಟ್ ಸಂಪರ್ಕ ಕಡಿತಗೊಳಿಸಿರಲಿಲ್ಲ. ಆದ್ರೆ ಜನವರಿ 26ರ ಪ್ರತಿಭಟನೆ ಬಳಿಕವಷ್ಟೇ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ.
-masthmagaa.com
Contact Us for Advertisement