masthmagaa.com:
ಕೊರೋನಾ ವೈರಸ್ ಕಣ್ಣಿಗೆ ಕಾಣದೇ ಇದ್ದರೂ ಮನುಷ್ಯರಿಗೆ ಹಲವು ಪಾಠಗಳನ್ನು ಕಲಿಸ್ತಿದೆ. ದುಡ್ಡು ಮುಖ್ಯವಲ್ಲ..ಆಹಾರ ಮುಖ್ಯ ಅನ್ನೋದನ್ನ ತೋರಿಸ್ತಿದೆ. ಜೊತೆಗೆ ಜಾತಿ, ಧರ್ಮ ಎಲ್ಲಕ್ಕಿಂತ ಜೀವ, ಮಾನವೀಯತೆಯೇ ದೊಡ್ಡದು ಅನ್ನೋದನ್ನ ತೋರಿಸಿಕೊಡುತ್ತಿದೆ. ಅದಕ್ಕೆ ಸಾಕ್ಷಿ ಎಂಬಂತೆ ಮುಸ್ಲಿಂ ಸಮುದಾಯದವರು ಹಿಂದೂ ವ್ಯಕ್ತಿಯೊಬ್ಬರ ಚಟ್ಟಕ್ಕೆ ಹೆಗಲು ಕೊಟ್ಟು ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.
ಉತ್ತರ ಪ್ರದೇಶದ ಬುಲಂದ್ ಶಹರ್ನಲ್ಲಿ ರವಿಶಂಕರ್ ಎಂಬುವವರು ಕ್ಯಾನ್ಸರ್ನಿಂದ ಸಾವನ್ನಪ್ಪಿದ್ದರು. ಆದ್ರೆ ಅವರ ಜೊತೆಯಲ್ಲಿ ಯಾರೂ ಇರಲಿಲ್ಲ. ಹೀಗಾಗಿ ಅವರು ಸಾವನ್ನಪ್ಪಿದ ವಿಚಾರವನ್ನು ದೂರದ ಸಂಬಂಧಿಕರು, ಸ್ನೇಹಿತರಿಗೆ ತಿಳಿಸಲಾಯ್ತು. ಆದ್ರೆ ಲಾಕ್ಡೌನ್ ಹಿನ್ನೆಲೆಯಲ್ಲಿ ಯಾರೂ ಅಂತ್ಯಸಂಸ್ಕಾರಕ್ಕೆ ಬರಲಿಲ್ಲ. ಈ ವಿಚಾರ ತಿಳಿದ ಮುಸ್ಲಿಂ ಸಮುದಾಯದವರು ವ್ಯಕ್ತಿಯ ಮನೆಗೆ ಧಾವಿಸಿದ್ದಾರೆ. ಅಲ್ಲದೆ ಚಟ್ಟ ರೆಡಿ ಮಾಡಿ, ಕೊನೆಗೆ ತಾವೇ ಅದಕ್ಕೆ ಹೆಗಲು ಕೊಟ್ಟಿದ್ದಾರೆ. ಹಿಂದೂಗಳ ಸಂಪ್ರದಾಯದಂತೆ ಚಟ್ಟ ಹೊತ್ತುಕೊಂಡು ಹೋಗುವಾಗ ರಾಮ್ ನಾಮ್ ಸತ್ಯ ಹೈ ಎಂದು ಘೋಷಣೆ ಕೂಡ ಕೂಗಿದ್ದಾರೆ. ನಂತರ ಸ್ಮಶಾನದಲ್ಲೂ ಹಿಂದೂ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.
ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಹಿಂದೂ-ಮುಸ್ಲಿಂ ಭಾವೈಕ್ಯತೆಯ ಸಂಕೇತ ಎಂದು ನೆಟ್ಟಿಗರು ಹಾಡಿ ಹೊಗಳಿದ್ದಾರೆ.
-masthmagaa.com
Contact Us for Advertisement