ದೆಹಲಿ: ಕೊರೋನಾ ಆಕ್ಟ್ ಆಫ್ ಗಾಡ್ ಅಂದ್ರೆ ‘ದೇವರ ಕೃತ್ಯ’ ಎಂದಿದ್ದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಕೆಂಡಕಾರಿದ್ದಾರೆ. ನಿರ್ಮಲಾ ಸೀತಾರಾಮನ್ರನ್ನು ಮೆಸೆಂಜರ್ ಆಫ್ ಗಾಡ್ ಎಂದು ಕರೆದಿರುವ ಚಿದಂಬರಂ, ಕೊರೋನಾವನ್ನು ಆಕ್ಟ್ ಆಫ್ ಗಾಡ್ ಎಂದು ಕರೆಯೋದಾದ್ರೆ, 2017-18, 2018-19, 2019-20ರಲ್ಲಿ ಸೋಂಕು ಬರುವ ಮುನ್ನ ಇದ್ದ ಆರ್ಥಿಕ ಅವ್ಯವಸ್ಥೆಯನ್ನು ಹೇಗೆ ವಿವರಿಸಬೇಕು..? ಎಂದು ಪ್ರಶ್ನಿಸಿದ್ದಾರೆ. ಜೊತೆಗೆ ಜಿಎಸ್ಟಿ ನಷ್ಟ ಭರ್ತಿಗೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ನೀಡಿರುವ ಎರಡೂ ಆಯ್ಕೆಗಳು ಅಸಂಬದ್ಧವಾಗಿದ್ದು, ಒಪ್ಪಿಕೊಳ್ಳಲು ಸಾಧ್ಯವಿಲ್ಲ.. ಕೇಂದ್ರ ಸರ್ಕಾರ ಹಣಕಾಸಿನ ಜವಾಬ್ದಾರಿಯಿಂದ ತಪ್ಪಿಸಿಕೊಳ್ತಿದ್ದು, ಇದು ಸಂಪೂರ್ಣ ದ್ರೋಹ ಮತ್ತು ಕಾನೂನಿನ ನೇರ ಉಲ್ಲಂಘನೆಯಾಗಿದೆ ಎಂದು ಚಿದಂಬರಂ ಟ್ವೀಟ್ ಮಾಡಿದ್ದಾರೆ.
ಮೊನ್ನೆಯಷ್ಟೇ ಜಿಎಸ್ಟಿ ಸಮಿತಿ ಸಭೆ ಬಳಿಕ ಮಾತನಾಡಿದ್ದ ನಿರ್ಮಲಾ ಸೀತಾರಾಮನ್, ಕೊರೋನಾ ಒಂದು ರೀತಿಯಲ್ಲಿ ಆಕ್ಟ್ ಆಫ್ ಗಾಡ್ ಅಂದ್ರೆ ‘ದೇವರ ಕೃತ್ಯ’.. ಹೀಗಾಗಿ ರಾಜ್ಯ ಸರ್ಕಾರಗಳು ಸಾಲ ಪಡೆಯೋ ಮೂಲಕ ಜಿಎಸ್ಟಿಯಿಂದಾದ ನಷ್ಟವನ್ನು ಭರಿಸಿಕೊಳ್ಳಬೇಕು ಎಂದು ಎರಡು ಆಯ್ಕೆಗಳನ್ನು ಮುಂದಿಟ್ಟಿದ್ದರು.
Contact Us for Advertisement