masthmagaa.com:
ಕೃಷಿ ತಿದ್ದುಪಡಿ ಕಾನೂನುಗಳನ್ನ ವಿರೋಧಿಸಿ ದೆಹಲಿ ಗಡಿಯಲ್ಲಿ ರೈತರು ಪ್ರತಿಭಟನೆ ಶುರು ಮಾಡಿ ಇವತ್ತಿಗೆ ಒಂದು ತಿಂಗಳಾಗಿದೆ. ಇದರ ನಡುವೆಯೇ ಒಂದು ಮಹತ್ವದ ಬೆಳವಣಿಗೆ ನಡೆದಿದೆ. ಕೇಂದ್ರ ಸರ್ಕಾರದ ಜೊತೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಲು ರೈತ ಸಂಘಟನೆಗಳ ಮುಖಂಡರು ಡೇಟ್ ಅಂಡ್ ಟೈಂ ಫಿಕ್ಸ್ ಮಾಡಿದ್ದಾರೆ. ಡಿಸೆಂಬರ್ 29ರ ಬೆಳಗ್ಗೆ 11 ಗಂಟೆಗೆ ಮಾತುಕತೆ ನಡೆಯಲಿದೆ. ಇವತ್ತು ಸಭೆ ಸೇರಿದ ವಿವಿಧ ರೈತ ಸಂಘಟನೆಗಳ ಮುಖಂಡರು ಈ ಬಗ್ಗೆ ನಿರ್ಧಾರ ಮಾಡಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ನೂತನ ಕೃಷಿ ಕಾನೂನುಗಳನ್ನ ವಾಪಸ್ ಪಡೆಯಬೇಕು ಮತ್ತು ಕನಿಷ್ಠ ಬೆಂಬಲ ಬೆಲೆ ಮುಂದುವರಿಯುತ್ತೆ ಅನ್ನೋದಕ್ಕೆ ಲೀಗಲ್ ಗ್ಯಾರಂಟಿ ನೀಡುವ ಕಾನೂನು ಜಾರಿಗೆ ತರಬೇಕು ಅನ್ನೋದೇ ನಮ್ಮ ಪ್ರಮುಖ ಅಜೆಂಡಾ ಅಂತ ರೈತ ಮುಖಂಡರು ಹೇಳಿದ್ದಾರೆ. ದೇಶದ ರೈತರನ್ನ ಉದ್ದೇಶಿಸಿ ಪ್ರಧಾನಿ ಮೋದಿ ನಿನ್ನೆ ಮಾತನಾಡುವಾಗ ರೈತರ ಜೊತೆಗೆ ಮಾತುಕತೆ ನಡೆಸಲು ಸರ್ಕಾರ ಸದಾ ಸಿದ್ಧ ಅಂತ ಹೇಳಿದ್ದರು.
-masthmagaa.com
Contact Us for Advertisement