masthmagaa.com:
ಬೆಂಗಳೂರು: ರಾಜ್ಯದ ವಿವಿಧ ಮಠ-ಮಂದಿರ, ಧಾರ್ಮಿಕ ಸಂಸ್ಥೆಗಳಿಗೆ ರಾಜ್ಯ ಸರ್ಕಾರ 88.75 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. 2019-20ರ ಬಜೆಟ್ನಲ್ಲಿ ಘೋಷಿಸಿದಂತೆ 39 ಮಠಗಳಿಗೆ ತಲಾ 1ಕೋಟಿ ರೂ. ಹಾಗೂ ದೇವಾಲಯಗಳ ಟ್ರಸ್ಟ್ಗಳಿಗೆ 49.75 ಕೋಟಿ.ರೂ ಬಿಡುಗಡೆ ಮಾಡಲಾಗಿದೆ.
ಬುದ್ಧ ಬಸವ ಅಂಬೇಡ್ಕರ್ ಪ್ರತಿಷ್ಠಾನ, ಜಗದ್ಗುರು ಚಾಲುವಾಡಿ ಪೀಠ ಸಿರಾ, ಸಿದ್ದರಾಮೇಶ್ವರಸ್ವಾಮಿ ಟ್ರಸ್ಟ್, ಮುರುಘಾ ಮಠ, ಸಿದ್ದಗಂಗಾ ಮಠ, ಮತ್ತು ಪುಷ್ಪಗಿರಿ ಮಹಾಸಂಸ್ಥಾನ ಮಠಗಳು ತಲಾ 1 ಕೋಟಿ ರೂ. ಅನುದಾನ ಪಡೆದಿವೆ.
2019-20 ಹಾಗೂ 2020-21ನೇ ಸಾಲಿನ ಬಜೆಟ್ನಲ್ಲಿ ಮಠ-ಮಂದಿರ, ಧಾರ್ಮಿಕ ಸಂಸ್ಥೆಗಳಿಗೆ ಅನುದಾನ ಘೋಷಣೆ ಮಾಡದ್ದರೂ, ಕಾರಣಾಂತರದಿಂದ ಅನುದಾನ ಬಿಡುಗಡೆ ಮಾಡಿರಲಿಲ್ಲ. ಈಗ ಸಿಎಂ ಯುಡಿಯೂರಪ್ಪ ಅನುದಾನ ಬಿಡುಗಡೆ ಮಾಡಿದ್ದಾರೆ ಅಂತ ಮುಜರಾಯಿ ಖಾತೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
-masthmagaa.com
Contact Us for Advertisement