masthmagaa.com:

ಕೃಷಿ ಕಾನೂನುಗಳ ಬಗ್ಗೆ ಸರ್ಕಾರದ ಜೊತೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಲು ರೈತ ಸಂಘಟನೆಗಳು ಮುಂದಾಗಿರುವ ಬೆನ್ನಲ್ಲೇ ಮಾತುಕತೆಯ ದಿನಾಂಕ, ಸಮಯ ಮತ್ತು ಸ್ಥಳವನ್ನ ಕೇಂದ್ರ ಸರ್ಕಾರ ಘೋಷಿಸಿದೆ. ಡಿಸೆಂಬರ್ 30 ಅಂದ್ರೆ ಬುಧವಾರ ಮಧ್ಯಾಹ್ನ 2 ಗಂಟೆಗೆ ದೆಹಲಿಯ ವಿಜ್ಞಾನ ಭವನದಲ್ಲಿ ಮಾತುಕತೆ ನಡೆಯಲಿದೆ. ಮಾತುಕತೆ ವೇಳೆ ರೈತರ ಸಮಸ್ಯೆಗಳನ್ನ ಮುಕ್ತ ಮನಸಿನಿಂದ ಬಗೆಹರಿಸಲು ಸರ್ಕಾರ ಬದ್ಧವಾಗಿದೆ ಅಂತಾನೂ ಪ್ರಕಟಣೆಯಲ್ಲಿ ಸರ್ಕಾರ ತಿಳಿಸಿದೆ. ಈ ಹಿಂದೆ ಡಿಸೆಂಬರ್ 29ಕ್ಕೆ ಮಾತುಕತೆ ನಡೆಸೋಣ ಅಂತ ರೈತ ಸಂಘಟನೆಗಳು ಹೇಳಿದ್ದವು. ಅದನ್ನೀಗ ಕೇಂದ್ರ ಸರ್ಕಾರ ಡಿಸೆಂಬರ್ 30ಕ್ಕೆ ನಿಗದಿ ಮಾಡಿದೆ. ಈ ಮಾತುಕತೆಯಲ್ಲಾದ್ರೂ ಸಮಸ್ಯೆ ಬಗೆಹರಿದು ರೈತರ ಪ್ರತಿಭಟನೆ ಅಂತ್ಯವಾಗುತ್ತಾ ಅನ್ನೋದನ್ನ ಕಾದು ನೋಡ್ಬೇಕು.

-masthmagaa.com

Contact Us for Advertisement

Leave a Reply